ವಿಟ್ಲ, ಆ.28 (DaijiworldNews/HR): ಕೊಳ್ನಾಡು ಗ್ರಾಮದ ಖಂಡಿಗ ಕಾಳೀಶ್ವರ ಸ್ವಾಮಿ ಯಾನೆ ಸುರೇಶ್ ಪ್ರಭು ಮತ್ತು ಐವರ ತಂಡದಿಂದ ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಸ್ವಾಮೀಜಿ ಸೇರಿ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸ್ವಾಮೀಜಿ ಸುರೇಶ್ ಪ್ರಭು(57), ಶಿವಾನಂದ ಕಾಮತ್(33) ಹಾಗೂ ಚಂದ್ರ(30) ಎಂದು ಗುರುತಿಸಲಾಗಿದೆ.
ಜಮೀನು ವಿವಾದವೇ ಕೊಲೆ ಯತ್ನಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುರೇಶ ಪ್ರಭು ಅಲಿಯಾಸ್ ಕಾಳೀಶ್ವರ ಸ್ವಾಮಿ, ಶಿವಾನಂದ ಕಾಮತ್, ಆತನ ಹೆಂಡತಿ ಜಯಲಕ್ಷ್ಮೀ, ತಾಯಿ ಸುಮತಿ ಹಾಗೂ ಇತರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.