ಉಡುಪಿ, ಆ 28 (DaijiworldNews/MS): ಕಳೆದ 6 ವರ್ಷಗಳಿಂದ ಕೃಷ್ಣಜನ್ಮಾಷ್ಟಮಿ ಸಂಧರ್ಭದಲ್ಲಿ ವೇಷ ಧರಿಸಿ ಬಡ ಮಕ್ಕಳ ಚಿಕಿತ್ಸೆಗೆ ನೆರವಾಗುತಿದ್ದ ರವಿ ಕಟಪಾಡಿ ಈ ಬಾರಿ ಮತ್ತೊಮ್ಮೆ ಅಗತ್ಯ ಮಕ್ಕಳ ಚಿಕಿತ್ಸೆಗಾಗಿ ವೇಷ ಧರಿಸುವ ಪಣ ತೊಟ್ಟಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು "ಕಳೆದ 6 ವರ್ಷಗಳಿಂದ ನಾನು ವೇಷ ಧರಿಸಿ ನನ್ನ ಗೆಳೆಯರೊಂದಿಗೆ ಸೇರಿ ಸುಮಾರು 33 ಮಕ್ಕಳ ಚಿಕಿತ್ಸೆಗೆ ಸಹಾಯವನ್ನು ಮಾಡಿದ್ದೇವೆ. ಈ ವರ್ಷಗಳಲ್ಲಿ ಸುಮಾರು 72 ಲಕ್ಷ ರುಪಾಯಿಗೂ ಮಿಕ್ಕಿ ಸಹಾಯನ್ನು ನಮ್ಮ ತಂಡ ಮಾಡಿದೆ. ಇದ್ಯಾವುದು ನನ್ನ ಹಣವಲ್ಲ. ಉಡುಪಿಯ ಜನತೆ ನನ್ನ ತಂಡದ ಕಾರ್ಯಕ್ಕೆ ಮೆಚ್ಚಿ ಉದಾರಾಗಿ ನೀಡಿದ ಮೊತ್ತ ಇದು. ಈ ಬಾರಿ ಕೊರೊನಾ ಕಾರಣದಿಂದ ಉಡುಪಿಯಲ್ಲಿ ವೇಷ ಹಾಕಲು ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿಗಳ ತಿಳಿಸಿದ್ದರು. ಆದರೆ ನನ್ನ ಮನವಿಗೆ ಸ್ಪಂದಿಸಿದ ಅವರು ಕೊರೊನಾ ಕುರಿತು ಜನಜಾಗೃತಿ ಮೂಡಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ವೇಷ ಧರಿಸಲು ಅವಕಾಶ ನೀಡಿದ್ದಾರೆ. ಈ ಬಾರಿ ಕೂಡಾ ಉಡುಪಿಯ ಜನತೆ ನಮಗೆ ಸಹಕಾರ ನೀಡುತ್ತಾರೆ ಎಂಬ ಭರವಸೆ ನಮಗಿದೆ" ಎಂದರು.
ಈ ಬಾರಿ ರವಿ ಫ್ರೆಂಡ್ಸ್ ತಂಡ 6 ಮಂದಿ ಮಕ್ಕಳ ಚಿಕಿತ್ಸೆಗಾಗಿ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಬ್ಲಡ್ ಕ್ಯಾನ್ಸರ್, ಲಿವರ್ ಟ್ರಾನ್ಸ್ ಫ್ಲಾಂಟ್, ಮತ್ತು ಅಪಘಾತ ಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ ಸೇರಿದಂತೆ ಒಟ್ಟು ೬ ಮಂದಿ ಮಕ್ಕಳಿಗೆ ಈ ಬಾರಿ ಸಹಾಯ ಮಾಡಲು ತಂಡ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಡಿದ ರವಿ ಫ್ರೆಂಡ್ಸ್ ತಂಡದ ಮಹೇಶ್ ಶೆಣೈ ಮಾತನಾಡಿ " ಈವರೆಗೆ ನಮ್ಮ ತಂಡದ ಮೂಲಕ ಸುಮಾರು ೭೫ ಲಕ್ಷ ರೂಪಾಯಿ ಗಳಷ್ಟು ಮೊತ್ತವನ್ನು ನೀಡಿದ್ದೆವೆ. ಮಾತ್ರವಲ್ಲದೆ ೩೩ ಮಕ್ಕಳಿಗೆ ಚಿಕಿತ್ಸೆಗಾಗಿ ನೆರವು ನಿಡೀದ್ದೆವೆ. ಈ ವರ್ಷ ಒಂದು ಕೋಟಿಯ ಗುರಿಯನ್ನು ಮುಟ್ಟುವ ನಿರ್ಧಾರವನ್ನು ತಂಡ ಮಾಡಿದೆ" ಎಂದರು.
ಈ ಬಾರಿ ರವಿ ಕಟಪಾಡಿಯವರ ತಂಡ ಹಾಲಿವುಡ್ ಚಿತ್ರದ ಪಾತ್ರವಾದ ಡರ್ಕ್ ವನ್ ಲೈಟ್ ವೇಷ ಧರಿಸಲು ನಿರ್ದರಿಸಿದ್ದು ಇದಕ್ಕೆ ತಯಾರಿಗಳು ಈಗಾಗಲೇ ಆರಂಭವಾಗಿವೆ. ಅಗಸ್ಟ್ 30ಮತ್ತು 31 ರಂದು ತಂಡವು ಉಡುಪಿ, ಕಟಪಾಡಿ, ಸಂತೆಕಟ್ಟೆ, ಮಲ್ಪೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿರುಗಾಟ ಮಾಡಲಿದೆ.