ಮಂಗಳೂರು, ಆ 28 (DaijiworldNews/MS): ಉಳ್ಳಾಲದಿಂದ ಓಮನ್ ಗೆ ಉದ್ಯೋಗಕ್ಕೆಂದು ತೆರಳಿದ್ದ ಇಬ್ಬರು ಯುವಕರು ಕಡಲಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ.
ಉಳ್ಳಾಲದ ರಿಜ್ವಾನ್ ಅಲೆಕಳ , ಹಾಗೂ ಉಳ್ಳಾಲದ ಕೋಡಿ ಜಹೀರ್ ಮೃತಪಟ್ಟವರು. ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಇಲ್ಲಿನ ಕಡಲತೀರಕ್ಕೆ ಶುಕ್ರವಾರ ಸಂಜೆ ವೇಳೆ ವಿಹಾರಕ್ಕೆಂದು ತೆರಳಿದ್ದರು. ರಿಜ್ವಾನ್ ನೀರಿನಲ್ಲಿ ಮುಳುಗುತ್ತಿದ್ದಾಗ ಜಹೀರ್ ಆತನನ್ನು ಉಳಿಸಲು ಧಾವಿಸಿದ್ದರು. ಜಹೀರ್ ಅವರ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್ ಗಾಗಿ ಹುಡುಕಾಟ ಮುಂದುವರೆದಿದೆ.
ಮೃತ ಜಹಿರ್ ಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು ಕೆಲವೇ ದಿನಗಳಲ್ಲಿ ತಾಯಿನಾಡಿಗೆ ಆಗಮಿಸುವ ತಯಾರಿಯಲ್ಲಿದ್ದರು.