ಮಂಗಳೂರು, ಆ. 27 (DaijiworldNews/SM): ಕೇರಳ ಸರ್ಕಾರದ ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಹಾಲಿ ಶಾಸಕ ರಮೇಶ್ ಚೆನ್ನಿತಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ರವರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು "ಆಸ್ಕರ್ ಫೆರ್ನಾಂಡಿಸ್ ರವರ ಆರೋಗ್ಯದಲ್ಲಿ ಚೇತರಿಕೆ ಇದ್ದು ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ. ಅವರಿಗೆ ನಡೆಸಲಾದ ಶಸ್ತ್ರಚಿಕಿತ್ಸೆ ಕೂಡಾ ಯಶಸ್ವಿಯಾಗಿದೆ. ಆಸ್ಕರ್ ಫೆರ್ನಾಂಡಿಸ್ ಶೀಘ್ರವಾಗಿ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. ಆಸ್ಕರ್ ಫೆರ್ನಾಂಡಿಸ್ ರವರು ನನ್ನ ಮಾರ್ಗದರ್ಶಕರು. ನಾನು ಕೇರಳ ಎನ್.ಎಸ್.ಯು.ಐ ಪಧಾದಿಕಾರಿಯಾಗಿದ್ದ ಸಮಯದಲ್ಲಿ ಅವರು ನನಗೆ ಮಾರ್ಗದರ್ಶನ ಮಾಡಿದ್ದರು ಮಾತ್ರವಲ್ಲದೇ ಅವರ ಕುಟುಂಬ ಕೂಡಾ ನನಗೆ ಆಪ್ತವಾದುದು" ಎಂದರು.
ಇದೇ ಸಂಧರ್ಭದಲ್ಲಿ ಶಾಸಕ ರಮೇಶ್ ಚೆನ್ನಿತ್ತಲ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ,ಶ್ರೀ ಮೋಹನ್ ಚಂದ್ರ ನಂಬಿಯಾರ್,ವಂಡಬಳ್ಳಿ ಜಯರಾಮ್ ಶೆಟ್ಟಿ, ಕಾಸರಗೋಡಿನ ನೀಲಕಂಠನ್,ದೇವಸ್ಥಾನದ ಟ್ರಸ್ಟಿ ಶೇಖರ್ ಪೂಜಾರಿ,ದೇವಸ್ಥಾನದ ಪಿಆರ್ ಒ ಜಯಕುಮಾರ ಹಾಗೂ ಮಾಜಿ ಸಚಿವರ ಆಪ್ತಕಾರ್ಯದರ್ಶಿ ಅಶೋಕ್ ನಾಯಕ್ ಉಪಸ್ಥಿತರಿದ್ದರು.