ಕಾರ್ಕಳ, ಆ. 27 (DaijiworldNews/SM): ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ಎಂಬಲ್ಲಿ ಬಂಧಿಸಿದ್ದಾರೆ.
ಕುಕ್ಕುಂದೂರು ನಕ್ರೆ ಬೋಪಾಡಿ ಮನೆಯ ಮನೋಹರ ಬಂಧಿತ ಆರೋಪಿ. ೨೦೦೫ ಅಕ್ಟೋಬರ್ ೨೪ರಂದು ನಕ್ರೆ ಮಾಣಿಗುಡ್ಡೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ನಿವಾಸಿ ಆನಂದ ಎಂಬವರಿಗೆ ಆರೋಪಿ ಮನೋಹರ್ ಜಲ್ಲಿಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದ. ಅಂದು ಕಾರ್ಕಳ ನಗರದ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪ್ರಕರಣದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಜಾಮೀನು ಪಡೆದ ಆರೋಪಿ ಮನೋಹರ್ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕಾರ್ಕಳ ಡಿವೈಎಸ್ಪಿ ಎಸ್ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ನಗರ ಠಾಣಾ ಎಸ್ ಐ ಮಧು ಬಿ ಇ, ಅಪರಾಧ ಪತ್ತೆದಳದ ಎಸ್ ಐ ಮತ್ತು ದಾಮೋದರ ಕೆ ಬಿ ರವರ ಆದೇಶದಂತೆ ಕಾರ್ಕಳ ನಗರ ಠಾಣಾ ಎ ಎಸ್ ಐ ರಾಜೇಶ್, ಹೆಚ್ ಸಿ ಸಂಜಯ್, ಪಿ ಸಿ ಘನಶ್ಯಾಮ್ ರವರು ಆರೋಪಿ ಮನೋಹರ ಆಂದ್ರಪ್ರದೇಶ ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಮನೋಹರನಿಗೆ ೧೫ ದಿನಗಳ ತನಕ ನ್ಯಾಯಾಂಗ ಬಂಧನ ವಿಧಿಸಿದೆ.