ಬಂಟ್ವಾಳ, ಆ 27 (DaijiworldNews/PY): ಶಾಸಕ ರಾಜೇಶ್ ನಾಯ್ಕ್ ಅವರು ಪ್ರತಿಭಟನೆ ನಡೆಸುವ ರೈತರನ್ನು ದಂಧೆಕೋರರು ಎಂಬ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾಗಿ ಆಪಾದಿಸಿರುವ ದ.ಕ.ಜಿಲ್ಲಾ ಕಿಸಾನ್ ಕಾಂಗ್ರೆಸ್, ಇದನ್ನು ಕಟುವಾಗಿ ಟೀಕಿಸಿದೆ.
ಈ ಕುರಿತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧ್ಯಕ್ಷ ಮೋಹನ ಗೌಡ ಕಲ್ಮಂಜ, "ಕೇಂದ್ರ, ರಾಜ್ಯ ಸರ್ಕಾಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಸರ್ಕಾರಗಳೆಲ್ಲಾ ದಂಧೆಕೋರ ಮನೋಸ್ಥಿತಿಯವರನ್ನು ರಕ್ಷಣೆ ಮಾಡುತ್ತಿದೆ" ಎಂದರು.
"ಕೊರೊನಾ ಸಂಕಷ್ಟ ಸಂದರ್ಭ ದಂಧೆ ಮಾಡುತ್ತಿರುವುದು ಕೇಂದ್ರ ಸರ್ಕಾರವಲ್ಲವೇ?" ಎಂದು ಆರೋಪಿಸಿದರು.
"ಬಂಟ್ವಾಳದಲ್ಲಿ ಹಲವಾರು ಕೃಷಿಕರ ಭೂಮಿ ಹೈಟೆನ್ಶನ್ ಲೈನ್ನಿಂದ ಕಳೆದುಕೊಳ್ಳುವ ಭೀತಿ ಇದೆ ಇದರ ಕುರಿತ ನಿಲುವನ್ನು ತಿಳಿಸಲಿ" ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಹಾಗೂ ಬ್ಲಾಕ್ಗಳ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು ಇದ್ದರು.