ಗಂಗೊಳ್ಳಿ, ಆ 27 DaijiworldNews/MS): ಕಡಿಮೆ ರಕ್ತದೊತ್ತಡದೊಂದಾಗಿ ಯುವತಿ ಸಾವನ್ನಪ್ಪಿದ ಘಟನೆ ಹರ್ಕೂರು ಗ್ರಾಮದ ಗುಡಿಮನೆ ನಾರ್ಕಳಿಯಲ್ಲಿ ಆ.25 ರಾತ್ರಿ ಸಂಭವಿಸಿದೆ. ಇಲ್ಲಿನ ನಿವಾಸಿ ಅಶ್ವಿನಿ (೨೩) ಸಾವನ್ನಪ್ಪಿದವರು.
ಅಸ್ವಸ್ಥರಾಗಿದ್ದ ಅವರನ್ನು ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರು ಕಡಿಮೆ ರಕ್ತದೊತ್ತಡ ಆಗಿದೆ ಎಂದು ತಿಳಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.25 ರ ರಾತ್ರಿ 10.45 ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಅಶ್ವಿನಿ ಅವರು ಆ.23 ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊವೀಡ್ ಪ್ರಥಮ ಡೋಸ್ ಲಸಿಕೆ ಪಡೆದಿದ್ದುಆ. 24 ರ ರಾತ್ರಿ ಮನೆಯಲ್ಲಿರುವಾಗ ವಾಂತಿ ಕಾಣಿಸಿಕೊಂಡಿದ್ದು ಅಸ್ವಸ್ಥರಾಗಿದ್ದರು.
ಅಶ್ವಿನಿ ಅವರ ಸಹೋದರ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.