ಮಂಗಳೂರು, ಆ. 26 (DaijiworldNews/SM): ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ಮಂಗಳೂರಿನಲ್ಲಿ ಎನ್ ಎಸ್ ಯು ಐ ಪ್ರತಿಭಟನೆ ನಡೆಸಿದೆ.
ನಗರದ ಕ್ಲಾಕ್ ಟವರ್ ಮುಂಭಾಗ ರಸ್ತೆ ತಡೆಯುವ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಆರೋಪಗಳನ್ನು ಶೀಘ್ರ ಬಂಧಿಸಿ ಗಲ್ಲಿಗೇರಿಸಲು ಒತ್ತಾಯಿಸಲಾಯಿತು.
ಮುಂದಿನ ದಿನಗಳಲ್ಲಿ ಈ ಬಗ್ಗೆ ರಾಜ್ಯಾದ್ಯಂತ ಹೋರಾಟದ ಸೂಚನೆಯನ್ನು ಕೂಡ ನೀಡಲಾಯಿತು. ದೇಶದಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲಂದಂತಾಗಿದೆ. ಈ ರೀತಿಯ ಘಟನೆಯಿಂದ ದೇಶ ತಲೆತಗ್ಗಿಸುವಂತಾಗಿದೆ. ಕೇಂದ್ರ ಸರ್ಕಾರದ ಜನರ ಒಲೈಕೆಗೆ ಬೇಟಿ ಬಚವೋ ಹೇಳುತ್ತದೆ. ಆದರೆ ಅವರದ್ದೇ ಶಾಸಕ ಸಚಿವರಿಂದ ರಕ್ಷಿಸಬೇಕಿದೆ. ದೇಶದಲ್ಲಿ ಬಿಜೆಪಿ ಶಾಸಕ ಸಚಿವರಿಂದ ಬೇಟಿ ಬಚಾವೊ ಮಾಡಬೇಕಿದೆ ಎಂದು ಮಂಗಳೂರಿನಲ್ಲಿ ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಸುಹಾನ್ ಆಳ್ವಾ ಹೇಳಿಕೆ ನೀಡಿದ್ದಾರೆ.