ಮಂಗಳೂರು, ಆ 26 (DaijiworldNews/MS): ದಿನದಿಂದ ದಿನಕ್ಕೆ ಕೇರಳ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತಿದ್ದ, ಸಾವಿನ ಸಂಖ್ಯೆಯೂ ಅಧಿಕವಾಗಿದೆ. ರಾಜ್ಯದ ಗಡಿಯಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ ಇದ್ದರೂ ನಕಲಿ ಆರ್ ಟಿಪಿಸಿಆರ್ ವರದಿ ಸೃಷ್ಟಿಸಿ ಜಿಲ್ಲೆಗೆ ಅಕ್ರಮ ಪ್ರವೇಶಕ್ಕೆ ಯತ್ನಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ಏಳು ಮಂದಿಯನ್ನು ತಲಪಾಡಿ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಡೀಲ್ ನ ಮೊಹಮ್ಮದ್ ಶರೀಫ್ (34) ಮಂಜೇಶ್ವರದ ಅಬುಬಕ್ಕರ್ (28) ಚೆಂಗಳ ತೈವಳಪ್ಪು ವಿನ ಅಬ್ದುಲ್ ತಮೀಮ್ (೧೯), ಚೆರ್ವತ್ತೂರಿನ ಹದಿಲ್ (25), ಕಡಪ್ಪರದ ಇಸ್ಮಾಯಿಲ್ (48) ಚೆರ್ವತ್ತೂರಿನ ಕಬೀರ್ ಎಎಂ 24) ಹಸೀನ್ (31) ಇವರನ್ನು ಬಂಧಿಸಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಮಾಹಿತಿ ನೀಡಿ ‘ನಾವು ಕೇರಳ ಹಾಗೂ ದ.ಕ ಜಿಲ್ಲಾ ಗಡಿಗಳಲ್ಲಿ 17 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದಿ ಈ ಪೈಕಿ 9 ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿದೆ. ಕನಾರ್ಟಕ ಸರ್ಕಾರದ ಆದೇಶ ಪ್ರಕಾರ ರಾಜ್ಯ ಪ್ರವೇಶಕ್ಕೆ ಆರ್ ಟಿಪಿಸಿಆರ್ ನೆಗೆಟಿವ್ ವರದಿಯು ಕಡ್ಡಾಯವಾಗಿದೆ. ಕಂದಾಯ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಚೆಕ್ ಪೋಸ್ಟ್ಗಳಲ್ಲಿ 20 ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಎರಡು ದಿನಗಳಲ್ಲಿ ಚೆಕ್ ಪೋಸ್ಟ್ ನಲ್ಲಿ ನಕಲಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತೋರಿಸಿ ಅಕ್ರಮ ಪ್ರವೇಶಕ್ಕೆ ಮುಂದಾದ ೪ ವಿವಿಧ ಪ್ರಕರಣಗಳಲ್ಲಿ 7 ಜನರನ್ನು ಬಂಧಿಸಲಾಗಿದೆ. ಒಂದು ಪ್ರಕರಣದಲ್ಲಿ ವರದಿಯನ್ನು ಸೃಷ್ಟಿಸಿದ ವ್ಯಕ್ತಿಯನ್ನು ನಾವು ಬಂಧಿಸಿದ್ದೇವೆ ಮತ್ತು ಅವರಿಂದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕುಟುಂಬಗಳ ಪುರುಷ ಸದಸ್ಯರೊಂದಿಗೆ ಮೂವರು ಮಹಿಳೆಯರಿದ್ದೂ ಅವರನ್ನು ಹೆಚ್ಚಿನ ವಿಚಾರಣೆಗೆ ಕರೆಯಲಾಗುವುದು. ನಾವು ಇದನ್ನು ಕಾಸರಗೋಡು ಜಿಲ್ಲಾಡಳಿತದ ಗಮನಕ್ಕೂ ತರುತ್ತೇವೆ ಎಂದು ವಿವರಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಹರಿರಾಮ್ ಶಂಕರ್, ಡಿಸಿಪಿ ಅಪರಾಧ ಮತ್ತು ಸಂಚಾರ ಬಿ ಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು.