ಕಡಬ, ಆ 26 (DaijiworldNews/MS): ಕಡಬದ ಹೊಟೇಲ್ ವೊಂದರಲ್ಲಿ ದೋಸೆ ಸ್ಪೆಷಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಯುವಕ ಕಡಬದ ಹಲವರಿಗೆ ವಂಚಿಸಿ ನಾಪತ್ತೆಯಾಗಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
ಮೈಸೂರಿನ ಹಾರನ ಹಳ್ಳಿ ನಿವಾಸಿ ಶರತ್ ಬಾಬು ವಂಚಕ. ಇತ್ತೀಚೆಗೆ ಕಡಬದಲ್ಲಿ ಪ್ರಾರಂಭವಾದ ಹೊಟೇಲ್ ನಲ್ಲಿ ದೋಸೆ ಮಾಡುವ ಕೆಲಸಕ್ಕೆ ಸೇರಿ ಎರಡು ತಿಂಗಳು ಆಗುವಷ್ಟರಲ್ಲಿ ತನ್ನ ಮಾತಿನ ಮೋಡಿಯಿಂದ ಹರವರಿಂದ ನಗ - ನಗದು ಸೇರಿ ಇತರ ಸೊತ್ತುಗಳನ್ನು ಪಡೆದು ಸೋಮವಾರ ರಾತ್ರಿ ಬೆಳಗಾಗುವಷ್ಟರಲ್ಲಿ ನಾಪತ್ತೆಯಾಗಿದ್ದಾನೆ.
ಈ ಹಿಂದೆ ಕಾರ್ಕಳದಲ್ಲೂ ಕೆಲವರಿಗೆ ವಂಚಿಸಿದ್ದ ಎನ್ನಲಾಗಿದೆ. ಕಡಬದಲ್ಲೂ ಹಣ, ಆಭರಣ ವಾಹನ, ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಪರಾರಿಯಾಗಿರುವ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.