ಮಂಗಳೂರು, ಆ 25 (DaijiworldNews/MS): ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಪ್ರಕರಣಕ್ಕೆ ಮಾನಹಾನಿಕಾರಕ ಸಂದೇಶವೇ ಕಾರಣವೆಂದು ಮೃತರ ಪತ್ನಿ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ರೂಪೇಶ್ ಪವನ್ ರಾಜ್ ಎಂಬವರು ಆ.18ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ನಂತರ ಮೃತರ ಪತ್ನಿ ವಿನಿತಾಗೆ ಗಂಡ ಬರೆದಿಟ್ಟಿದ್ದ ಡೆತ್ ನೋಟ್ ದೊರಕಿದ್ದು, ಅದರಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಆತ್ಮಹತ್ಯೆಗೆ ನಾಲ್ವರ ವ್ಯಕ್ತಿಗಳ ಅಪಪ್ರಚಾರ ಹಾಗೂ ಬೆದರಿಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲಿ ಪತಿ ಸಾವಿಗೆ ಮಂಜ ನಾಯ್ಕ್, ನಯನ, ಹರೀಶ್ ಹಾಗೂ ಯಶವಂತರವರೇ ಕಾರಣ ಎಂದು ಹೇಳಿದ್ದಾರೆ ಮೃತರ ಸಂಬಂಧಿಕರಲ್ಲಿ, ರೂಪೇಶ್ ಬಗ್ಗೆ ಆರೋಪಿಗಳು ಅಪಪ್ರಚಾರ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ