ಕಾಸರಗೋಡು, ಆ. 24(DaijiworldNews/HR): ಕೊಲೆ ಮತ್ತು ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜೆಪ್ಪಿನಮೊಗರಿನ ಇಸ್ಮಾಯಿಲ್ (36) ಮತ್ತು ಮಣಿಮುಂಡದ ತೌಫಿಕ್ (44) ಎಂದು ಗುರುತಿಸಲಾಗಿದೆ.
ಒಂದು ವರ್ಷದ ಹಿಂದೆ ಮಂಜೇಶ್ವರ ಮಚ್ಚ೦ ಪಾಡಿಯಲ್ಲಿ ಇಸ್ಮಾಯಿಲ್ ಎಂಬವರನ್ನು ಉಸಿರುಗಟ್ಟಿಸಿ ಕೊಲೆ ಗೈದ ಪ್ರಕರಣದಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು.
ಆಗಸ್ಟ್ 16 ರಂದು ಉಪ್ಪಳದಲ್ಲಿ ಉತ್ತರ ಪ್ರದೇಶದ ನಿವಾಸಿಗಳು ವಾಸವಾಗಿರುವ ಫ್ಲಾಟ್ ಗೆ ನುಗ್ಗಿ ಹಲ್ಲೆ ನಡೆಸಿ 26 ಸಾವಿರ ರೂ . ದರೋಡೆ ಗೈದ ಪ್ರಕರಣದ ಆರೋಪಿಯಾಗಿರುವ ತೌಫಿಕ್ ನನ್ನು ಮಂಗಳವಾರ ಬೆಳಿಗ್ಗೆ ಉಪ್ಪಳದಿಂದ ಬಂಧಿಸಲಾಯಿತು.