ಮಂಗಳೂರು, ಆ 24 (DaijiworldNews/MS): ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಕರಾವಳಿಯ ಐವರ ಪೈಕಿ ನಾಲ್ವರು ಆಗಸ್ಟ್ 23 ಸೋಮವಾರ ತಾಯ್ನಾಡಿಗೆ ಮರಳಿದ್ದಾರೆ.
ಉಳ್ಳಾಲದ ಪ್ರಸಾದ್ ಆನಂದ್ ಬೆಳಗ್ಗೆ ಮಂಗಳೂರು ತಲುಪಿದ್ದು, ಮೂಡುಬಿದಿರೆಯ ಜಗದೀಶ್ ಪೂಜಾರಿ, , ಕಿನ್ನಿಗೋಳಿ ಪಕ್ಷಿಕೆರೆ ಡೆಸ್ಮಂಡ್ ಡಿಸೋಜ ಮತ್ತು ಬಜಪೆಯ ದಿನೇಶ್ ರೈ, ಅವರು ರಾತ್ರಿ 8.15 ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿದ್ದಾರೆ.
ಕರಾವಳಿ ಐವರು ಸೇರಿದಂತೆ ಕರ್ನಾಟಕದ ಒಟ್ಟು 7 ಮಂದಿ ಭಾನುವಾರ ದಿಲ್ಲಿಗೆ ತಲುಪಿದ್ದರು.