ಮಂಗಳೂರು, ಆ. 23 (DaijiworldNews/SM): ನೆಹರು ಕುಟುಂಬದ ಬಗ್ಗೆ ಮಾತನಾಡಿರುವ ಸಿ.ಟಿ. ರವಿ ಅರೆ ಹುಚ್ಚ. ಎಷ್ಟೇ ಖರ್ಚಾದರೂ ಪರವಾಗಿಲ್ಲ ಬೇಕಾದರೆ ವಿದೇಶಕ್ಕೆ ಕಳುಹಿಸಿಯಾದರೂ ಸಿಟಿ ರವಿಗೆ ಚಿಕಿತ್ಸೆ ನೀಡಲಾಗುವುದು ಎಂದು ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೆಹರು ಬಗ್ಗೆ ಮಾತನಾಡುವ ಸಿಟಿ ರವಿಯವರಿಗೆ ಇತಿಹಾಸ ಎಷ್ಟು ಅರಿವಿದೆ? ಸಿಟಿ ರವಿಯವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಲೈಸಲು ಈ ಹೇಳಿಕೆ ನೀಡಿದ್ದಾರೆ. ಮಂತ್ರಿ, ಸಿಎಂ ಪಟ್ಟದ ಆಸೆಗೆ ಈ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಟಿ ರವಿಗೆ ಯುವ ಕಾಂಗ್ರೆಸ್ ಮೂಲಕ ಚಿಕಿತ್ಸೆ ನೀಡುವ ಕಾರ್ಯ ಮಾಡಲಿದ್ದೇವೆ. ವಿದೇಶಕ್ಕೆ ಕಳುಹಿಸಿ ಎಷ್ಟೇ ಖರ್ಚಾದರೂ ಈತನಿಗೆ ಚಿಕಿತ್ಸೆ ನೀಡಿಸುವ ವ್ಯವಸ್ಥೆ ಮಾಡ್ತೇವೆ ಎಂದು ಮಂಗಳೂರಿನಲ್ಲಿ ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹೇಳಿದ್ದಾರೆ.
ನರೇಂದ್ರ ಮೋದಿ ಎಂದರೆ ಬೆಲೆ ಏರಿಕೆ, ಬಿಜೆಪಿ ಪಕ್ಷ ಎಂದರೆ ಬೆಲೆ ಏರಿಕೆ ಎಂದಿದ್ದಾರೆ. ಬಿಜೆಪಿ ಆಡಳಿತದಿಂದ ದೇಶದಲ್ಲಿ ಉದ್ಯೋಗ ನಷ್ಟವುಂಟಾಗಿದೆ. ಕೊರೋನಾದಿಂದ ಜನ ಸತ್ತಿಲ್ಲ. ಬದಲಾಗಿದೆ ಕೇಂದ್ರ, ರಾಜ್ಯ ಸರಕಾರದ ನೀತಿಯಿಂದ ಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.