ಬೆಳ್ಮಣ್, ಆ.23 (DaijiworldNews/HR): ಅಂಚೆ ಕಚೇರಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದ ಘಟನೆ ಕಾರ್ಕಳದ ಮುಂಡ್ಕೂರು ಅಂಚೆ ಕಛೇರಿಯಲ್ಲಿ ನಡೆದಿದೆ.
ಮುಂಡ್ಕೂರಿನ ಅಂಚೆ ಕಛೇರಿಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮರದ ಡಿವಿಆರ್ ತೆಗೆದು ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾಗಿ ಬರೀ ಕೈಯಲ್ಲಿ ವಾಪಸ್ಸಾಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.