ಉಡುಪಿ, ಆ.23 (DaijiworldNews/HR): "ಅಫ್ಘಾನಿಸ್ತಾನ ಪರಿಸ್ಥಿಯನ್ನು ನೋಡಿದಾಗ, ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವ ತೆಗೆದುಕೊಳ್ಳದೆ ಕಾಂಗ್ರೆಸ್ ತೆಗದುಕೊಂಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೆಂದು ಜನ ಮಾತಾಡ್ತ ಇದ್ದಾರೆ. ಜನಎಅ ಆಶೀರ್ವಾದ ಕಳೆದುಕೊಂಡವರು ಜನಶೀರ್ವಾದಕ್ಕೆ ಈ ರೀತಿ ಟೀಕೆ ವ್ಯಕ್ತಪಡಿಸುವುದು ಸಹಜ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ಜನಾಶೀವಾದಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ಟೀಕೆ ವ್ಯಕ್ತ ಪಡಿಸುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಜನ ನಮಗೆ ಆಶೀರ್ವಾದವನ್ನು ಕಳೆದ ಹತ್ತುವರ್ಷಗಳಿಂದ ಎಂತ ಹಂತದಲ್ಲೂ ಮಾಡಿದ್ದಾರೆ. ಜನರಿಂದ ಜನರ ಭಾವನೆಯಿಂದ ದೂರವಾದಂತವರು, ಜನರ ಆಶೀರ್ವಾದದಿಂದ ದೂರ ಆದಂತವರ ಮನಸ್ಸಿನಲ್ಲಿ ಈ ರೀತಿಯ ಟೀಕೆಗಳು ಬರುತ್ತವೆ. ಮತ್ತಿಷ್ಟು ಒಳ್ಳೆಯ ನಿರ್ವಹಣೆಯನ್ನು ಬೇರೆ ಯಾವುದೇ ಪರಿಸ್ಥಿಯನ್ನು ಮಡಲು ಸಾಧ್ಯ ಆಗ್ತಿರ್ಲಿಲ್ಲ" ಎಂದರು.
"ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮೂರು ಇಲಾಖೆ ಒಟ್ಟು 39 ಜಯಂತಿಗಳನ್ನು ಒಟ್ಟು ಸೇರಿ ಅರ್ಥಪೂರ್ಣವಾಗಿ ಜನರಿಗೆ ತಲುಪಿಸುವ ದೃಷ್ಟಿಯಿಂದ ಹೇಗೆ ಮಾಡಬೇಕು ಅನ್ನುವ ಹೊಸ ರೀತಿಯ ಚಿಂತನೆ ನಡೆಯುತ್ತಿದೆ. ಅಮೃತಮಹೋತ್ಸವ ಆಚರಣೆಯೂ ಕೂಡ ಈ ಮೂರು ಇಲಾಖೆಯ ಮುಖಾಂತರ ಹೇಗೆ ಮಾಡಬೇಕು, ನಾಡಿನ ಎಲ್ಲ ಜನರನ್ನು ತಲುಪಿಸಿ ದೇಶಭಕ್ತಿಯ ವಾತಾವರಣವನ್ನ ಇಡೀ ರಾಜ್ಯದೆಲ್ಲೆಡೆ ಹೇಗೆ ನಿರ್ಮಾಣ ಮಾಡಬೇಕು ಅನ್ನುವುದನ್ನು ಚಿಂತನೆ ಮಾಡುತ್ತಿದ್ದೇವೆ. ಬಹುಶಃ 10-15 ದಿವಸದೊಳಗೆ ಅಧಿವೇಶನದಲ್ಲಿ ಚರ್ಚೆಯಾಗಿ ಅಂತಿಮ ಸ್ವರೂಪಕ್ಕೆ ಬರುತ್ತದೆ" ಎಂದಿದ್ದಾರೆ.
ಇನ್ನು ನಾರಾಯಣಗುರು ನಿಗಮವನ್ನು ಸ್ಥಾಪಿಸುವ ಬಗ್ಗೆ ಸರಕಾರದಲ್ಲಿ ಚಿಂತನೆಯಿದೆ. ಮುಖ್ಯಮಂತ್ರಿಗಳನ್ನು ಆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಿಗಮದ ವ್ಯಾಪ್ತಿ, ಅನುದಾನ ಎಷ್ಟು? ಈ ವಿಷಯದ ಬಗ್ಗೆ ಒಂದು ಸುತ್ತಿನ ಮಾತುಕತೆ ಮಾಡಿ ಘೋಷಣೆ ಮಾಡಲಿದೆ" ಎಂದರು.
ನಾಡಗೀತೆಯ ಅವಧಿಯನ್ನು ಸೀಮಿತಗೊಳಿಸುವುದು ಮತ್ತು ಕನ್ನಡಾಮಬೆಯ ಭುವನೇಸ್ವರಿ ಪೋಟೋ ಯಾವರೀತಿ ಇರಬೇಕು ಎನ್ನುವ ಚರ್ಚೆ ಆರಂಭ ಆಗಿದೆ. ಖಂಡಿತಾ ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಇದಕ್ಕೋಂದು ತಾರ್ಕಿಕ ಅಂತ್ಯ ನಾಡಗೀತೆ ಸಂಗೀತ ಮತ್ತು ಅವಧಿ ಹೇಗಿರಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇವೆ. ಭುವನೇಶ್ವರಿಯ ಪೋಟೋ ಒಂದೇ ರೀತಿ ಇರಬೇಕು" ಎಂದು ಹೇಳಿದ್ದಾರೆ.