ಮಂಗಳೂರು, ಆ 22 (DaijiworldNews/PY): ಉಳ್ಳಾಲದಿಂದ ನಾಪತ್ತೆಯಾಗಿದ್ದ ಯುವಕ ಹಫೀಝ್ ಎಂಬಾತನ ಮೃತದೇಹ ಭಾನುವಾರ ಬೆಳಗ್ಗೆ ಕೋಟೆಪುರ-ಬೆಂಗ್ರೆ ನದಿಯಲ್ಲಿ ಪತ್ತೆಯಾಗಿದೆ.
ಉಳ್ಳಾಲದ ಬಸ್ತಿಪಡ್ಪು ನಿವಾಸಿ ಹಫೀಝ್ ಆಗಸ್ಟ್ 20ರ ಶುಕ್ರವಾರದಂದು ನಾಪತ್ತೆಯಾಗಿದ್ದನು. ಆತನ ದ್ವಿಚಕ್ರ ವಾಹನ ಉಳ್ಳಾಲದ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು.
ಕೂಲಿ ಕೆಲಸ ಮಾಡಿಕೊಂಡಿದ್ದ ಹಫೀಝ್ ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟಿದ್ದ. ರಾತ್ರಿಯಾದರೂ ಕೂಡಾ ಮನೆಗೆ ಬಾರದೇ ಇದ್ದ ಕಾರಣ ಮನೆಮಂದಿ ಆತನನ್ನು ಹುಡುಕಲು ಆರಂಭಿಸಿದ್ದರು. ಆಗಸ್ಟ್ 21ರ ಶನಿವಾರ ಬೆಳಗ್ಗೆ ಹಫೀಝ್ನ ಮೊಬೈಲ್, ಚಪ್ಪಲಿ ಹಾಗೂ ದ್ವಿಚಕ್ರ ವಾಹನ ಪತ್ತೆಯಾಗಿತ್ತು.
ಅದರಂತೆ ಉಳ್ಳಾಲ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದರು.