ಮಂಗಳೂರು, ಆ. 22 (DaijiworldNews/HR): ನಗರದ ವಿವಿಧ ಹೋಟೆಲ್ಗಳಲ್ಲಿ ರೂಮ್ ಪಡೆದು ಮತ್ತೆ ದೆಹಲಿಯ ಏಮ್ಸ್ನ ಪ್ರೊಫೆಸರ್ ಮತ್ತು ಸರ್ಜನ್ ಎಂದು ಹೇಳಿ ಬಾಡಿಗೆ ಕೊಡದೇ ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತನನ್ನು ವಿಶಾಖಪಟ್ಟಣಂ ಮೂಲದ ಶ್ರೀನಿವಾಸ್ (55) ಎಂದು ಗುರುತಿಸಲಾಗಿದೆ.
ಆರೋಪಿಯು ಏಮ್ಸ್ ನ ಗುರುತಿನ ಚೀಟಿ ತೋರಿಸಿ ನಗರದ ವಿವಿಧ ಹೋಟೆಲ್ ಗಳಲ್ಲಿ ಬಾಡಿಗೆಗೆ ಕೊಠಡಿಗಳನ್ನು ಬಾಡಿಗೆಗೆ ಪಡೆದು ನಂತರ ಆತ ಬಾಡಿಗೆ ಪಾವತಿಸದೆ ಹೋಗುತ್ತಿದ್ದು, ಆಗಸ್ಟ್ 21 ರ ಶನಿವಾರ ನಗರದ ನವಭಾರತ್ ಸರ್ಕಲ್ ಬಳಿಯ ಹೋಟೆಲ್ ನಲ್ಲಿ ಅದೇ ಟ್ರಿಕ್ ಆಡಲು ಯತ್ನಿಸಿದರು. ಹೋಟೆಲ್ ಸಿಬ್ಬಂದಿ ತಕ್ಷಣವೇ ಬಂದರ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದರು. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದರು.
ಬಂದರು ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ಪೊಲೀಸರ ತನಿಖೆಯ ಸಮಯದಲ್ಲಿ, ಆರೋಪಿ ತಮಿಳುನಾಡಿನ ಸೇಲಂನಲ್ಲಿ ಹೋಟೆಲ್ಗಳಲ್ಲಿ ಇದೇ ರೀತಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.