ಉಳ್ಳಾಲ, ಆ 21 (DaijiworldNews/MS): ಎನ್ ಐ ಎ ದಾಳಿ ನಡೆಸಿದ ಮಾಜಿ ಶಾಸಕ ಇದಿನಬ್ಬ ಅವರ ಪುತ್ರ , ಉದ್ಯಮಿ ಬಿ.ಎಂ. ಭಾಷಾ ಅವರ ಮನೆಗೆ ಅಕ್ರಮ ಪ್ರವೇಶ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಹಾಗೂ ಮತ್ತಿತರ ಕಾರ್ಯಕರ್ತರ ಮೇಲೆ ಸೂಕ್ತ ಕ್ರಮ ಕ್ಕೆಗೊಳ್ಳುವಂತೆ ಆಗ್ರಹಿಸಿ ಮೇಲಂಗಡಿಯ ಅಬೂಬಕರ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ.11ರಂದು ಉದ್ಯಮಿ ಬಿ.ಎಂ. ಬಾಷಾರ ಮನೆಯ ಮುಂದೆ ಶರಣ್ ಪಂಪ್ ವೆಲ್ ನೇತೃತ್ವದ ಬಜರಂಗದಳ ಕಾರ್ಯಕರ್ತರು ಸೇರಿಕೊಂಡು ಪ್ರಚೋದನಕಾರಿ ಘೋಷಣೆ ಕೂಗಿ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಪೊಲೀಸರು ಸಕಾಲದಲ್ಲಿ ಸ್ಥಳಕ್ಕೆ ಆಗಮಿಸದೇ ಇದ್ದಿದ್ದರೆ ಶರಣ್ ಪಂಪ್ ವೆಲ್ ನೇತೃತ್ವದ ಗುಂಪು ಭಾಷಾರ ಮನೆಯೊಳಗೆ ಪ್ರವೇಶಿಸಿ 'ದಾಂಧಲೆ ನಡೆಸುವ
ಸಾಧ್ಯತೆ ಇತ್ತು ಎಂದು ದೂರಿನಲ್ಲಿ ಆರೋಪಿಸಿರುವ ಅಬೂಬಕರ್, ಶಾಂತಿಯುತವಾಗಿದ್ದ ಉಳ್ಳಾಲ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸಿದ ಶರಣ್ ಪಂಪ್ ವೆಲ್ ಮತ್ತಿತರ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕಾನೂನು ಶ್ರಮ ಜರಗಿಸಬೇಕೆಂದು ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.