ಮಂಗಳೂರು, ಆ. 20 (DaijiworldNews/SM): ಐಸಿವೈಎಂ ಮಂಗಳೂರು ಪ್ರಾಂತ್ಯದ 2019 -21ರ ಕೇಂದ್ರ ಸಮಿತಿಗೆ ಚುನಾವಣೆ ನಡೆದಿದ್ದು, ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಹುದ್ದೆ ಹಸ್ತಾಂತರ ಕಾರ್ಯ ನಗರದ ಶಾಂತಿ ಕಿರಣ್ ಬಜ್ಜೋಡಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಜೈಸನ್ ಲೋರೆನ್ಸ್ ಕ್ರಾಸ್ತಾ ಮೊಗರ್ನಾಡ್ ಆಯ್ಕೆಯಾಗಿದ್ದು, ಹುದ್ದೆ ಸ್ವೀಕರಿಸಿದರು.
ಹೊಸದಾಗಿ ಚುನಾಯಿತ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಆಗಸ್ಟ್ 19ರಂದು ಹಸ್ತಾಂತರಿಸಲಾಯಿತು. ಐಸಿವೈಎಂ ಸೆಂಟ್ರಲ್ ಕೌನ್ಸಿಲ್ ಸದಸ್ಯರ ನೇತೃತ್ವದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
2021-22 ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯಕ್ಕೆ ಪ್ಲಾಟಿನಂ ಜಯಂತಿ ವರ್ಷ. ಈ ಜಯಂತಿಯ ವರ್ಷವನ್ನು ಉದ್ಘಾಟಿಸಿದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹಾ 75ನೇ ವರ್ಷದ ಲೋಗೋವನ್ನು ಅನಾವರಣಗೊಳಿಸಿದರು.
ಐಸಿವೈಎಂ ನೂತನ ಸಮಿತಿ:
ಅಧ್ಯಕ್ಷ: ಜೈಸನ್ ಲಾರೆನ್ಸ್ ಕ್ರಾಸ್ತಾ, ಮೊಗರ್ನಾಡ್
ಉಪಾಧ್ಯಕ್ಷ: ಟೆರೆನ್ಸ್ ಕ್ರಾಸ್ತಾ, ಗುರುಪುರ
ಮಹಿಳಾ ಉಪಾಧ್ಯಕ್ಷೆ: ಸಪ್ನಾ ಗೊನ್ಸಾಲ್ವಿಸ್, ನೀರುಮಾರ್ಗ
ಕಾರ್ಯದರ್ಶಿ: ವಿಶ್ಮಾ ಡಿಸಿನ್ಹಾ, ಕಶಿಯಾ
ಜಂಟಿ ಕಾರ್ಯದರ್ಶಿ: ರಾಕೇಶ್ ರೇಗೋ, ಸಿದ್ದಕಟ್ಟೆ
ಖಜಾಂಚಿ: ಅನಿಲ್ ಜಾನ್ ಸಿಕ್ವೇರಾ, ಬೋರಿಮಾರ್
ಲೆಕ್ಕ ಪರಿಶೋಧಕ: ದೀಪಕ್ ಡಿಸೋಜ, ಪಂಜ
ಪ್ರಾದೇಶಿಕ ಐಸಿವೈಎಂ ಅಧ್ಯಕ್ಷ: ಜೈಸನ್ ಪಿರೇರಾ, ಶಿರ್ತಾಡಿ
ಪ್ರಾದೇಶಿಕ ಪ್ರತಿನಿಧಿ ಮಹಿಳೆ: ಫೆವಿಶಾ ಮಾಂಟೆರೋ, ರಾಣಿಪುರ
MIJARC ಪ್ರತಿನಿಧಿ: ಕ್ಲೀಟಾ ಡಿಸೋಜಾ, ಸುರತ್ಕಲ್
ನಿಕಟಪೂರ್ವ ಅಧ್ಯಕ್ಷರು: ಲಿಯಾನ್ ಲಾಯ್ಡ್ ಸಲ್ಡಾನ್ಹಾ, ಬೆಂದೂರು
ಸಾರ್ವಜನಿಕ ಸಂಪರ್ಕ ಅಧಿಕಾರಿ: ಎಲ್ಸಿಟಾ ಟ್ರಿನ್ಸಿ ಕಾರ್ಡೋಜ, ಕಿರೆಮ್
ಆಮ್ಚೊ ಯುವಕ್ ಪ್ರತಿನಿಧಿ: ವಿನಿತಾ ರೇಷ್ಮಾ ಡಿ'ಸೋಜಾ, ಕಯ್ಯಾರ್
ರೆಡ್ ಡ್ರಾಪ್ ಪ್ರತಿನಿಧಿ: ಜೋಯಲ್ ಕ್ರಿಸ್ಟಲ್ ಕ್ರಾಸ್ತಾ, ಕುಂಬ್ಳೆ
ನಾಮನಿರ್ದೇಶಿತ ಸದಸ್ಯ: ಪ್ರದೀಪ್ ಪ್ರಜ್ವಲ್ ರೊಸಾರಿಯೋ, ಕುಪ್ಪೆಪದವ್