ಮಂಗಳೂರು, ಆ.20 (DaijiworldNews/HR): ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಕರಾವಳಿ ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ತಾವು ಸುರಕ್ಷಿತವಾಗಿರುವ ಬಗ್ಗೆ ಸಂದೇಶವನ್ನು ಕಳುಹಿಸಿದ್ದಾರೆ.
ಈ ಕುರಿತು ದೈಜಿವರ್ಲ್ಡ್ ವಾಹಿನಿಗೆ ಆಡಿಯೋ ಸಂದೇಶದ ಕಳುಹಿಸಿದ ಸಿಸ್ಟರ್ ತೆರೇಸಾ ಕ್ರಾಸ್ತಾ, "ಇಟಲಿಯನ್ ಸಂಸ್ಥೆಯಲ್ಲಿ ನಾನು ಕೆಲಸ ಮಾಡುತ್ತಿದ್ದು, ಅವರು ನನ್ನ ಸುರಕ್ಷತೆಗೆ ಎಲ್ಲಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ ನಮ್ಮನ್ನು ಇಟಲಿಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದು, ನಾನು ಕಾಬೂಲ್ ಕಾನ್ವೆಂಟ್ನಲ್ಲಿ ಸುರಕ್ಷಿತವಾಗಿದ್ದೇನೆ" ಎಂದು ತಿಳಿಸಿದ್ದಾರೆ.
ಇನ್ನು "ಸದ್ಯಕ್ಕೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲವಿದ್ದು, ಏರ್ಪೋರ್ಟ್ ಒಳಗೆ ಪ್ರವೇಶವಿಲ್ಲ ಹಾಗಾಗಿ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರವೇಶ ನೀಡುವಾಗ ನಮ್ಮನ್ನು ಕರೆದೊಯ್ಯುತ್ತಾರೆ" ಎಂದರು.
ನಾನು ಇಂಡಿಯನ್ ಎಂಬಸಿಯಲ್ಲಿ ಕೂಡ ರಿಜಿಸ್ಟರ್ ಮಾಡಿದ್ದೇನೆ. ಇಂಡಿಯನ್ ರಾಯಭಾರ ಕೂಡ ನನ್ನ ಸುರಕ್ಷತೆಗೆ ಕೆಲಸ ಮಾಡುತ್ತಿದ್ದು, ಸಹಕಾರ ನೀಡಿದ ಎಲ್ಲರಿಗೂ ನನ್ನ ವಂದನೆಗಳು ಎಂದು ಹೇಳಿದ್ದಾರೆ.