ಉಡುಪಿ, ಆ 20 (DaijiworldNews/MS): ಸೌದಿ ಅರೇಬಿಯಾದಲ್ಲಿ ಒಂದು ವರ್ಷ ಒಂಭತ್ತು ತಿಂಗಳು ನಿರಪರಾಧಿಯಾಗಿದ್ದು ಜೈಲುವಾಸ ಅನುಭವಿಸಲು ಕಾರಣರಾದ ಅಪರಾಧಿಗಳಿಗೆ ನ್ಯಾಯಲಯ ಕಠಿಣ ಶಿಕ್ಷೆ ಸಿಗಬೇಕು. ನನ್ನಂತ ಇನ್ನೊಬ್ಬ ಅಮಾಯಕನಿಗೆ ಶಿಕ್ಷೆ ಆಗಬಾರದು. ನಕಲಿ ಖಾತೆ ಸೃಷ್ಟಿಸಿದ ಅಪರಾಧಿಗಳು ಈಗ ಜಾಮೀನು ಮೇಲೆ ಹೊರಗೆ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಆದರೆ ಅವರಿಗೆ ಶಿಕ್ಷೆ ಆಗುವವರೆಗೂ ಕಾನೂನು ಹೋರಾಟ ಮಾಡುತ್ತೇನೆ, ಸೌದಿಯಲ್ಲಿ ಯಾವ ಪ್ರಭಾವವವೂ ನಡೆಯಲ್ಲ. ನನ್ನ ವಿರುದ್ದ ಪಿತೂರಿ ನಡೆಸಿದವರು ಜೈಲಿನ್ಲಿದ್ದಾರೆ. ಇದು ಕೇವಲ ಕಾನೂನು ಹೋರಾಟ ಮತ್ತು ಸತ್ಯದಿಂದ ನಾನು ಬಿಡುಗಡೆಯಾಗಿದ್ದೇನೆ, ಎಂದು ಉಡುಪಿಗೆ ಮರಳಿದ ಹರೀಶ್ ಬಂಗೇರ ಅವರು ಹೇಳಿದರು.
ಅವರು ಇಂದು ಉಡುಪಿ ಪ್ರೆಸ್ ಕ್ಲಬನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, "ಘಟನೆಯಾದ ನಂತರ ಒಂದು ವರ್ಷ ಒಂಭತ್ತು ತಿಂಗಳು ಹೊರ ಜಗತ್ತಿನ ಸಂಪರ್ಕವಿಲ್ಲದೆ ಒಂಟಿಯಾಗಿ ಕಳೆದಿದ್ದೇನೆ, ಮಾನಸಿಕವಾಗಿ ಹಿಂಸೆ ಅನುಭವಿಸಿದೆ. ನನ್ನ ನಂಬಿದ ಕುಟುಂಬಕ್ಕೆ ಎರಡು ವರ್ಷ ಸ್ವಲ್ಪ ಹಣ ಕೊಡಲೂ ಅಗಿಲ್ಲ. ಬಂಧನವಾದ ಮೇಲೆ ಕೆಲಸದಿಂದ ತೆಗೆದು ಬಿಟ್ಟುç. ವೇತನವೂ ಸಿಗಲಿಲ್ಲ. ಆರು ತಿಂಗಳ ಸೌಲಭ್ಯ ವೇತನ ಕೊಟ್ಟಿಲ್ಲ. ನಿರಪರಾದಿ ಎಂದು ಸಾಬೀತಾದ ಮೇಲೆ ಯಾವ ಹಣವೂ ಸಿಕ್ಕಿಲ್ಲ. ನನ್ನ ಬಳಿ ಇದ್ದ ಎರಡು ಮೊಬೈಲ್ ಕೂಡ ಜೈಲಾಧಿಕಾರಿಯಲ್ಲಿದೆ, ಈಗಲೂ ನನ್ನಲ್ಲಿ ಹಣವಿಲ್ಲ, ಬರಿಗೈಯಲ್ಲಿದ್ದೇನೆ. ಇಷ್ಟಾದ ಮೇಲೆ ಮುಂದೆ ಸೌದಿ ಹೋಗುವ ಯೋಚನೆಯೇ ಇಲ್ಲ. ಹೆಂಡತಿ, ಕುಟುಂಬಸ್ಥರು, ಸ್ನೇಹಿತರು ಸಂಘಟನೆಗಳು ನನ್ನ ಬಿಡುಗಡೆ ಸಹಾಯ ಮಾಡಿದ್ದಾರೆ.
ಮೊದಲ ಮೂರು ತಿಂಗಳು ಸೈಬರ್ನಲ್ಲಿ ಕೇಸು ದಾಖಲಿಸುವಲ್ಲಿ, ಪೋಲಿಸ್ ಇಲಾಖೆಯ ತನಿಖೆಯಲ್ಲಿ ಮತ್ತು ಕೋವಿಡ್ ನಿಂದಾಗಿ ಮೂರು ತಿಂಗಳು ವಿಳಂಬವಾಯ್ತು. ನಂತರ ಎಸ್ಪಿ ನಿಶಾ ಜೇಮ್ಸ್ ಅವರು ಪ್ರಕರಣವನ್ನು ಗಂಬೀರವಾಗಿ ತೆಗೆದುಕೊಂಡು ಕಾರ್ಯ ಪ್ರವೃತ್ತರಾದರು. ನನ್ನ ಹೆಸರಲ್ಲಿ ನಕಲಿ ಖಾತೆ ಮಾಡಿದ ಸಹೋದರರ ಗುರುತಾಗಲಿ ಪರಿಚಯವಾಗಲಿ ಇಲ್ಲ. ಖೇದಕರವೆಂದರೆ, ನಮ್ಮ ಭಾರತೀಯರೇ ನನ್ನ ವಿರುದ್ದ ಪಿತೂರಿ ನಡೆಸಿದರು, ಸಾವಿನ ದವಡೆಯಿಂದ ಸ್ವಲ್ಪದರಲ್ಲೆ ತಪ್ಪಿ ಹೊರ ಬಂದಿದ್ದೇನೆ.
ಪತ್ನಿ ಸುಮನಾ ಮಾತನಾಡಿ, "ಎರಡು ಕಣ್ಣೀರಲೇ ಬದುಕಿದ್ವಿ, ತುಂಬಾ ಅನುಭವಿಸಿದ್ದೇವೆ. ಇದು ಸೈಬರ್ ಕ್ರೈಂ ಆಗಿದ್ದು ತಾಂತ್ರಿಕ ಕಾರಣದಿಂದ ಸ್ವಲ್ಪ ಕಷ್ಟವಾಗಿತ್ತು, ಹರೀಶ ಬಂಧನವಾದ ದಿನದಿಂದ ಇಲ್ಲಿಯವರೆಗೆ ಕಾನೂನಿನ ಹೋರಾಟದ ಬೆನ್ನತ್ತಿದ್ದೇನೆ. ಮನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾಗಿರು ರವೀಂದ್ರನಾಥ್ ಶಾನುಭಾಗ್ ಕಾನೂನು ಹೋರಾಟ ಮಾಡಿ, ಭಾರತಿಯ ರಾಯಭಾರಿಗೆ ಒತ್ತಡ ತಂದು ಕೆಲಸ ಕೆಲಸ ಮಾಡಿದರು. ಗೂಗಲ್ ಮೇಲ್ ನಿಂದ ಸಿಕ್ಕಿದ ಒಂದು ನಂಬರಿನ ಜಾಡು ಹಿಡಿದು ಹೋದಾಗ ಅಪರಾದಿಗಳು ಬಲೆಗೆ ಬಿದ್ದರು. ಮೇ ೨, ೨೦೨೧ ರಂದು ಪತಿ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆ ಆಗುವ ಕರೆ ಬಂತು. ಅದರೂ ಪ್ರತ್ಯಕ್ಷವಾಗಿ ನೋಡುವವರೆಗೆ ಮನಸ್ಸಿನಲ್ಲಿ ದುಗುಡ ಹಾಗೇಯೆ ಇತ್ತು. ನನ್ನ ಗಂಡನ ಹೆಸರಲ್ಲಿ ನಕಲಿ ಖಾತೆ ಮಾಡಿ, ಅವರ ಧರ್ಮದ ವಿರುದ್ದ ಅವರೇ ಬರೆದು ಅವಮಾನ ಮಾಡಿದ್ದಾರೆ. ಇಂತಹವರಿಗೆ ನಮ್ಮ ಕಾನೂನಿನಲ್ಲಿ ಏನು ಶಿಕ್ಷೆಯಿಂದೆ, ಈ ಪ್ರಕರಣದ ಅರೋಪಿಗಳಿಗೆ ಸಿಕ್ಷೆ ಆಗುವವರೆಗೆ ಬಿಡುವುದಿಲ್ಲ ಎಂದು ಅವರು ತಿಳಿಸಿದರು.
ಈ ಘಟನೆಯ ನಂತರ ಬಿಡುಗಡೆ ನಿರಂತರ ಶ್ರಮ ಪಟ್ಟವರಲ್ಲಿ ಕೋಟೇಶ್ವರ ಗ್ರಾಮ ಪಂಚಯತ್ ನ ಸದಸ್ಯರಾದ ಲೋಕೇಶ್ ಅಂಕದಕಟ್ಟೆ ಅವರು ಮಾತನಾಡಿ, ನಮ್ಮ ಹೋರಾಟಕ್ಕೆ ಹಲವರು ಮಂದಿ ಕೈ ಜೋಡಿಸಿದ್ದಾರೆ. ಮಂಗಳೂರಿನ ಮಾಸ ಸಂಘಟನೆ ಏರ್ ಟಿಕೆಟ್ ಮಾಡಿಕೊಟ್ಟಿತು. ಇನ್ನು ಜೈ ಭಾರ್ಗವ ತಂಡ, ಅಭಿಮತ ತಂಡ, ಉಡುಪಿ ಮೂಲದ ಜೋಯ್ಸನ್ ಲೂವಿಸ್, ಮುಂಬೈನ ಜಲಾಲ್ ಮತ್ತು ಮುದಾಸರ್, ಇಂಡೋನೋಶ್ಯಾ ರಾಯಭಾರಿಯಲ್ಲಿನ ಸುಕೇಶ್ ಶೆಟ್ಟಿ ವಲ್ತೂರು ಸಹಾಯ ಮಾಡಿದ್ದಾರೆ. ಇದು ಕಾನೂನು ಹೊರಾಟಕ್ಕೆ ಜಯ. ಈ ಹೋರಾಟ ಮುಂದೆಯೂ ಇರುತ್ತೆ"ಎಂಬ ಆಶಾವಾದ ವ್ಯಕ್ತಪಡಿಸಿದರು.