ಪುತ್ತೂರು, ಆ. 19 (DaijiworldNews/SM): ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘನ ವಾಹನಗಳಿಗೆ ನಿರ್ಬಂಧ ಹಿನ್ನೆಲೆ ಗುಂಡ್ಯ ವಾಹನ ತಪಾಸಣೆ ಕೇಂದ್ರದಲ್ಲಿ ಘನ ವಾಹನಗಳು ಸಿಲುಕಿಕೊಂಡಿದ್ದು, ವಾಹನ ಚಾಲಕರು ಆಹಾರವಿಲ್ಲದೆ ಪರದಾಡುತ್ತಿದ್ದಾರೆ.
ಹಲವು ದಿನಗಳಿಂದ ಲಾರಿಗಳು ಈ ಭಾಗದಲ್ಲಿ ಬಾಕಿಯಾಗಿವೆ. ಇದರಿಂದಾಗಿ ವಾಹನ ಮಾಲಕರು, ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ನೂರಾರು ವಾಹನ ಚಾಲಕರು ಸೇರಿದ್ದು, ಆಕ್ರೋಶಗೊಂಡಿದ್ದಾರೆ.
ಇನ್ನು ಸ್ಥಳಕ್ಕೆ ಕಡಬ ತಹಶಿಲ್ದಾರ್, ಉಪ್ಪಿನಂಗಡಿ ಪೊಲೀಸರ ಭೇಟಿ ನೀಡಿದ್ದು, ಚಾಲಕರ ಜೊತೆ ಮಾತುಕತೆ ನಡೆಸಿದ್ದಾರೆ. ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಚಾಲಕರ ಮನವಿ ಮಾಡಿಕೊಂಡಿದ್ದಾರೆ.