ಉಡುಪಿ, ಆ.19 (DaijiworldNews/HR): ವೀರ ಸಾರ್ವಕರ್ ದೇಶದ ಹೋರಾಟಗಾರ, ಎರಡು ಬಾರಿ ಕರಿನಿರೀನ ಅನುಭವಿಸಿದವರು ದೇಶದ ಚರಿತ್ರೆಯನ್ನು ಓದದವರಿಗೆ ಅವರ ಬಗ್ಗೆ ಗೊತ್ತಿಲ್ಲ. ಭಾರತೀಯರು ಸ್ವಾತಂತ್ರ್ಯ ಹೊರಟಕ್ಕೆ ಕೊಡುಗೆ ನೀಡಿದವರ ಚರಿತ್ರೆ ಓದಬೇಕು. ಭಾರತದ ಹಿನ್ನಲೆ ಗೊತ್ತಿರಬೇಕು. ಸ್ವಾತಂತ್ರ್ಯ ಹೋರಾಟಗಾರರ ವಿರೋಧ ಮಾತನಾಡಿದವರಿಗೆ ಚರಿತ್ರೆ ಬಗ್ಗೆ ಗೊತ್ತಿದೆಯಾ? ಇತಿಹಾಸ ಓದಿದಾರಾ? ಯಾವ ಶಾಲೆಯಲ್ಲಿ ಕಲಿತ್ತಿದ್ದಾರೆ ಅನ್ನುವುದು ಮುಖ್ಯವಾಗುತ್ತದೆ. ದೇಶಭಕ್ತ ಗೌರವಿಸದ ವ್ಯಕ್ತಿ, ಅವನು ದೇಶದ ಎಲ್ಲಾ ಸೌಲಭ್ಯವನ್ನು ಅನುಭವಿಸ್ತಾನೆ ಮತ್ತು ಇದೇ ರೀತಿ ಗಲಾಟೆ ಮಾಡುತ್ತ ಇರುತ್ತಾನೆ. ಸರಕಾರ ಇದರ ಬಗ್ಗೆ ತೀವ್ರ ತನಿಖೆಯಗಬೇಕು. ಉಗ್ರ ಶಿಕ್ಷೆ ಕೊಡಬೇಕು. ಮಕ್ಕಳು ಇತಿಹಾಸವನ್ನು ಓದಭೇಕು ಅದರಿಂದ ಪ್ರೇರಣೆ ಪಡೆಯಬೇಕು. ಅಫಘ್ಘಾನ್ ಅಂತಹ ದೇಶಗಳಲ್ಲಿ ಇರುವ ಸರಕಾರ ಹೋಗಿ ತಾಲಿಬಾನ್ ವಶಕ್ಕೊಳಪಟ್ಟಿದೆ. ಈ ಕಾಲದಲ್ಲೂ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದೆ. ಜಗತ್ತು ಜಾಗೃತವಾಗಬೇಕಿದೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ಡಾರೆ.
ಈ ಕುರಿತು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಂಗಳೂರಿನಲ್ಲಿ ಎನ್ಐಎ ಕಛೇರಿ ಆಗುವುದರ ಬಗ್ಗೆ ಹಿಂದೆ ಮತನಾಡಿದ್ದೇವೆ. ಮಂಗಳೂರು ಅತೀ ಸೂಕ್ಷ್ಮ ಪ್ರದೇಶ. ಕೇಂದ್ರ ಮಂತ್ರಿ ಅಮಿತ್ ಷಾ ಅವರಲ್ಲಿ ಈ ಬಗ್ಗೆ ಚರ್ಚಿದ್ದೇನೆ. ಇದರ ಅವಶ್ಯಕತೆ ಇದೆ" ಎಂದರು.
ಇನ್ನು ಕೇಂದ್ರ ಸದನದಲ್ಲಿ 42 ಹೊಸ ಮಂತ್ರಿಗಳ ಪರಿಚಯ ಮಾಡಲು ವಿರೋಧ ಪಕ್ಷಗಳು ಅವಕಾಶ ಕೊಡಲಿಲ್ಲ. ಯಾವುದೇ ಮಂತ್ರಿ ಅಥವಾ ದೇಶದ ಪ್ರದಾನಿ ಒಂದು ಪಕ್ಷಕ್ಕೆ ಮಾತ್ರ ಸೀಮಿತ ಅಲ್ಲ ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯಕ್ಕೆ ಕೊಡಲಿ ಏಟು ಕೊಟ್ಟಂತಾಗಿದೆ , ಸಕಾರಣ ಇಲ್ಲದೆಯೇ ಯಾವುದೆ ಅಧಿವೇಶನ ಮಡಲು ವಿರೋಧ ಪಕ್ಷದ ನಾಯಕರು ಬಿಡಲಿಲ್ಲ. ಮೊದಲ ಅಧಿವೇಶನದಲ್ಲಿ ದೇಶಧ ಸಂಕಷ್ಟದ ವಿಚಾರ ಚರ್ಚೆ ಮಾಡಲು ಬಿಡಲಿಲ್ಲ, ಮಾರ್ಷಲ್ ಗಳನ್ನು ಹೊಡೆದರು. ದೇಶದಲ್ಲಿ ಮೊದಲ ಭಾರಿಗೆ ಈ ರೀತಿ ಘಟನೆ ನಡೆದಿದೆ. ಆದರೆ ಪ್ರಧಾನ ಮಂತ್ರಿಯವರು ಲೋಕಸಭಾ ಸದಸ್ಯರನ್ನು ಜನರೆದುರು ಪರಿಚಯ ಮಾಡಿಸಲು ಈ ಜನಾಶೀರ್ವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ದೇಶದಲ್ಲಿ 70% ಕೃಷಿ ಅವಲಂಬಿತರಾಗಿದ್ದಾರೆ. ಕೃಷಿ ಪೂರಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೃಷಿ ಲಾಭದಾಯಕವಲ್ಲ ಎನ್ನುವುದಕ್ಕೆ ಜನ ಕೃಷಿಯಿಂದ ಹಿಂದೆ ಸರಿತಾ ಇದ್ದಾರೆ. ೮೦%ರಷ್ಟು ಮಂದಿ ಸಣ್ಣ ಮತ್ತು ಮಧ್ಯಮ ವರ್ಗದವರು ದುಡಿಯುತ್ತಿದ್ದಾರೆ. ಕೈಷಿಯ ಪನರುತ್ಥಾನಕ್ಕಾಗಿ ಪ್ರದಾನಮಂತ್ರಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಬೇಳೆ ಕಾಳುಗಳು ಉತ್ಪಾದನೆ ಮತ್ತು ಖಾದ್ಯತೈಲಕ್ಕೆ ಸ್ವಾವಲಂಬನೆ ಇಲ್ಲ. ಖಾದ್ಯ ತೈಲದ ಆಮದಿಗಾಗಿ ಈಗ ಹೆಚ್ಚು ವಿದೇಶಿ ವಿನಮಯಕ್ಕೆ ಖರ್ಚ ಮಾಡ್ತಾ ಇದ್ದೇವೆ. ಶೇ 73 ರಷ್ಟು ಆಮದು ಆಗ್ತಿದೆ. 95% ಎಣ್ಣೆ ಪಾಮ್ ಆಯಿಲ್ ಎಣ್ಣೆ ಮಿಶ್ರಣ ಆಗಿದೆ. ಹಾಗಾಗಿ ಇಲ್ಲಿ ಕಲಬೆರೆಕೆ ಗೊಂಡ ಉತ್ಪನ್ನಗಳು ಸಿಗುತ್ತವೆ. ಸ್ವಾವಲಂಬನೆಗಾಗಿ ರೈತರಿಗೆ ಎಣ್ಣೆ ಕಾಳು ಬೆಳೆಸಲು ಉಚಿತ ಮಿನಿ ಕಿಟ್ ಕೊಡುತ್ತಾ ಇದೆ. ಎಣ್ಣೆ ಸಂಸ್ಕರಣಾ ಕೈಗಾರಿಕೆಗೆ ಆಧ್ಯತೆ ಕೊಡುತ್ತಾ ಇದೆ. ಎಣ್ಣೆ ಕಾಳುಗಳ ಬೆಳೆಗೆ ಮತ್ತು ರೈತರು ಹೇಗೆ ಅಳವಡಿಸಿ ಕೊಳ್ಳಬೇಕು ಎನ್ನುವ ಸಂಶೋಧನೆ ನಡೀತಾ ಇದೆ" ಎಂದರು.
"ಕಳೆದ ಒಂದು ವರ್ಷದಲ್ಲಿ ವಿಶ್ವದಾಖಲೆಯ ಆಹಾರೋತ್ಪಾದನೆ ಆಗಿದೆ. ದೇಶ ಸು. 305 ಮಿಲಿಯನ್ ಮೆಟ್ರಿಕ್ ಟನ್ ಬೇಳೆ ಕಾಳುಗಳು, ದವಸ ಧಾನ್ಯಗಳು ಮೊದಲ ಬಾರಿಗೆ ಭಾರತದಲ್ಲಿ ಉತ್ಪಾದನೆಯಾಗಿದೆ. 327 ಮೆಟ್ರಿಕ್ ಟನ್ ಹಣ್ಣು ಹಂಪಲು, ತರಕಾರಿ ಉತ್ಪಾದನೆಯಾಗಿದೆ, ಇದು ದಾಖಲೆಯ ಉತ್ಪಾದನೆ. ಬಹಳ ದೊಡ್ಡ ಪ್ರಮಾಣದಲ್ಲೂ ರಪ್ತಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ, ಕಳೆದ ಆರು ವರ್ಷದ ಶ್ರಮದಿಂದ ಉತ್ಪನ್ನಗಳನ್ನ ರಫ್ತು ಮಾಡುವುದರಲ್ಲಿ ಭಾರತ ಈಗ 9ನೇ ಸ್ಥಾನದಲ್ಲಿದೆ" ಎಂದು ಹೇಳಿದ್ದಾರೆ.
ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ವಿಧಾನ ಪರಿಷತ್ ಸದಸ್ಯರಾದ ತುಳಸಿ ಮುನಿರಾಜು, ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಉದಯ ಕುಮಾರ್ ಶಟ್ಟಿ, ಮಂಗಳೂರು ವಿಭಾಗ ಪ್ರಭರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.