ಕಾಸರಗೋಡು, ಆ. 18 (DaijiworldNews/SM): ನಾಮಪತ್ರ ಹಿಂತೆಗೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕೆ. ಸುರೇಶ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಬಾಲಕೃಷ್ಣ ಶೆಟ್ಟಿಯಿಂದ ಮಾಹಿತಿ ಕಲೆ ಹಾಕಿದೆ. ಕ್ರೈಂ ಬ್ರಾಂಚ್ ಅಧಿಕಾರಿಗಳು ಕಾಸರಗೋಡು ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆ ನಡೆಸಿದೆ.
ಬಿ ಎಸ್ಪಿ ಅಭ್ಯರ್ಥಿ ಕೆ. ಸುಂದರ ರವರ ನಾಮಪತ್ರ ಹಿಂಪಡೆಯಲು ಕೆ. ಸುರೇಂದ್ರನ್ ರ ಮುಖ್ಯ ಏಜಂಟ್ ಆಗಿದ್ದ ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ ಎಂದು ತನಿಖೆಯಿಂದ ತಿಳಿದುಬಂದಿತ್ತು. ಇದರಂತೆ ವಿಚಾರಣೆ ನಡೆಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಕಾಸರಗೋಡಿನ ತಾಲಿಪಡ್ಪುನಲ್ಲಿರುವ ಹೋಟೆಲ್ ನಲ್ಲಿ ಮಾರ್ಚ್ 21ರಂದು ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ನಡೆದಿತ್ತು.
ಬಿ.ಎಸ್ಪಿ. ಅಭ್ಯರ್ಥಿ ಕೆ. ಸುಂದರರು ಬಾಲಕೃಷ್ಣ ಶೆಟ್ಟಿ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಈಗಾಗಲೇ ಯುವಮೋರ್ಚಾ ಮುಖಂಡ ಸುನಿಲ್ ನಾಯ್ಕ್, ಬಿಜೆಪಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮಣಿಕಂಠ ರೈ , ಮುರಳೀಧರ ಯಾದವ್ ಗೂ ಇನ್ನಿತರ ಮುಖಂಡರನ್ನು ವಿಚಾರಣೆ ನಡೆಸಿದೆ.
ಈಗಾಗಲೇ ಕ್ರೈಂ ಬ್ರಾಂಚ್ ಅಧಿಕಾರಿಗಳು ಮಾಹಿತಿಗಳನ್ನು ಕಲೆ ಹಾಕಿದ್ದು, ಬಳಿಕ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನ ವಿಚಾ ರಣೆ ನಡೆಸಲಿದೆ. ಏಪ್ರಿಲ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಿಂದ ಸ್ಪರ್ದಿಸಿದ್ದ ಕೆ. ಸುರೇಂದ್ರನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ . ಸುಂದರರಿಗೆ ನಾಮಪತ್ರ ಹಿಂಪಡೆಯಲು ಹಣ , ಮೊಬೈಲ್ ಫೋನ್ ನೀಡಿದ್ದಾಗಿ ಕೆ. ಸುಂದರ ಬಹಿರಂಗ ಪಡಿಸಿದ್ದರು.