ಕಾರ್ಕಳ, ಆ.17 (DaijiworldNews/HR): ತಾಲೂಕು ಜಂಕ್ಷನ್ ಸರ್ವಜ್ಞ ವೃತ್ತದ ಪರಿಸರದಲ್ಲಿ ಸಂಭವಿಸುತ್ತಿದ್ದ ರಸ್ತೆ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಸೂಕ್ತ ಪ್ರದೇಶದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ.
ಭವಾನಿ ಮಿಲ್ನಿಂದ ಬಂಗ್ಲೆಗುಡ್ಡೆ ಜಂಕ್ಷನ್ ವರೆಗಿನ ರಸ್ತೆಯನ್ನು ಚತುರ್ಥ ರಸ್ತೆಯನ್ನಾಗಿ ಮೇಲ್ದಾರ್ಜೆಗೇರಿಸಿದ ಬಳಿಕ ಇದೇ ರಸ್ತೆಯಾಗಿ ಓಡಾಟ ನಡೆಸುತ್ತಿರುವ ವಾಹನಗಳಿಗೆ ವೇಗಕ್ಕೆ ಗೊತ್ತು ಗುರಿ ಇಲ್ಲದೇ ಹೋದುದರಿಂದ ಹಲವು ಹಲವು ಅಫಘಾತಗಳು ಸಂಭವಿಸುತ್ತಿವೆ.
ಸರ್ವಜ್ಞ ವೃತ್ತದಲ್ಲಿ ರಾತ್ರಿ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು, ಇದೇ ಪರಿಸರದಲ್ಲಿ ವಿದ್ಯುತ್ ದೀಪಗಳ ವ್ಯವ್ಯಸ್ಥೆ ಇಲ್ಲದೇ ಹೋಗಿರುವುದು ಅಪಘಾತಗಳು ಸಂಭವಿಸಲು ಕಾರಣವಾಗಿದೆ ಎಂದು ನಾಗರಿಕ ಆರೋಪದ ಮೇಲೆ ಪತ್ರಿಕೆ ವರದಿ ಚೆಲ್ಲಿತ್ತು. ಇದನ್ನು ಮನಗಂಡಿರುವ ಸಂಬಂಧ ಪಟ್ಟ ಇಲಾಖೆಯು ಪರಿಸರದಲ್ಲಿ ವಿದ್ಯುತ್ ದೀಪ ಅಳವಡಿಸಿ ಕರ್ತವ್ಯ ನಿಷ್ಠೆ ತೋರಿಸಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಪೊಲೀಸ್ ಇಲಾಖೆಯೂ ಎಚ್ಚೆತ್ತುಗೊಂಡು ಬ್ಯಾರಿಕೇಡ್ ಅವಳವಡಿಸಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ.