ಉಳ್ಳಾಲ, ಆ 17 (DaijiworldNews/MS): ಕಬಕದಲ್ಲಿ ಎಸ್ ಡಿಪಿಐ ಕಾರ್ಯಕರ್ತರು ತಾಲಿಬಾನಿಗರ ರೀತಿಯಲ್ಲಿ ವರ್ತಿಸಿದ್ದಾರೆ. ಇದು ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ತೀವ್ರವಾಗಿ ಖಂಡಿಸುತ್ತದೆ ಎಂದು ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಪ್ರೈ. ಲಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.
ಅವರ್ ಕುತ್ತಾರು ಖಾಸಗಿ ಹೊಟೇಲಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಎಸ್ ಡಿಪಿಐ ವರ್ತನೆಯನ್ನು ಬಿಜೆಪಿ ಕಟು ಶಬ್ದಗಳಿಂದ ಖಂಡಿಸುತ್ತದೆ. ವರ್ತನೆ ಗಮನಿಸುವಾಗ ಎಸ್ಡಿಪಿಐನವರು ತಾಲಿಬಾನಿಗರಿಗೆ ಮೂಲವೇ ಅನ್ನುವ ಸಂಶಯ ಕಾಡುತ್ತಿದೆ. ಗ್ರಾಮ ಪಂಚಾಯಿತಿನಲ್ಲಿ ನಾಲ್ಕು ಸೀಟುಗಳು ಬಂದ ತಕ್ಷಣ ದುರಾಡಳಿತ ತೋರಲು ಪ್ರಯತ್ನಿಸದಿರಿ. ಘಟನೆ ಕುರಿತು ಈಗಾಗಲೇ ಉಸ್ತುವಾರಿ ಸಚಿವರು, ಗೃಹಮಂತ್ರಿ ಹಾಗೂ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಕ್ರಮಕ್ಕೆ ತಿಳಿಸಿದ್ದೇವೆ ಎಂದ ಅವರು ಉಳ್ಳಾಲದ ಚೆಂಬುಗುಡ್ಡೆ ಮತ್ತು ಮಾಸ್ತಿಕಟ್ಟೆಯಲ್ಲಿ ಐಸಿಸ್ ಸಂಘಟನೆ ನಂಟು ಹೊಂದಿರುವವರನ್ನು ಎನ್ ಐಎ ಬಂಧಿಸಿದೆ. ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಗೆ ಬೆಂಬಲ ಸೂಚಿಸುವವರು ಇರುವ ಪ್ರಕರಣಗಳು ಇರುವುದರಿಂದ ತಕ್ಷಣ ಎನ್ ಐಎ ಕಚೇರಿಯಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾಗುವಂತೆಯೂ ಒತ್ತಾಯಿಸಿದ್ದೇವೆ. ಹೆಚ್ಚಿನ ಯುವಕರನ್ನು ಐಸಿಸ್ ಗೆ ಸೇರಿಸುವ ತಂತ್ರ ಉಳ್ಳಾಲದಲ್ಲಿ ನಡೆಯುತ್ತಿದೆ ಅನ್ನುವುದು ಎನ್ ಐಎ ವಿಚಾರಣೆಯಿಂದ ತಿಳಿದುಬಂದಿದೆ. ತಕ್ಷಣ ಉಳ್ಳಾಲದ ಶಾಸಕರು ಕೂಡ ಒತ್ತಡ ಕಚೇರಿ ಸ್ಥಾಪನೆಗೆ ಒತ್ತಡ ಹೇರಬೇಕಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಉಪಾಧ್ಯಕ್ಷ ಯಶವಂತ ಅಮೀನ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ ಹಾಗೂ ತಾ.ಪಂ ಮಾಜಿ ಸದಸ್ಯ ನವೀನ್ ಪಾದಲ್ಪಾಡಿ ಉಪಸ್ಥಿತರಿದ್ದರು.