ಮಂಗಳೂರು, ಆ.17 (DaijiworldNews/HR): ಅಪರಿಚಿತ ದುಷ್ಕರ್ಮಿಗಳು ಪಂಪ್ವೆಲ್ ಫ್ಲೈಓವರ್ನ ಗೋಡೆಯ ಮೇಲೆ 'ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ವೆಲ್' ಎಂದು ಬ್ಯಾನರ್ ಅಳವಡಿಸಿದ್ದು, ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕೂಡ ಅದೇ ರೀತಿ 'ವೀರ ಸಾವರ್ಕರ್ ರೈಲ್ವೇ ನಿಲ್ದಾಣ' ಎಂದು ಬ್ಯಾನರ್ ಹಾಕಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಆಗಸ್ಟ್ 15 ರಂದು ಕಬಕ ಗ್ರಾಮ ಪಂಚಾಯತ್ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಾಹನದ ಮೇಲೆ ವೀರ್ ಸಾವರ್ಕರ್ ಅವರ ಫೋಟೋ ಹಾಕಿದ್ದಕ್ಕೆ ಎಸ್ಡಿಪಿಐ ಕಾರ್ಯಕರ್ತರು ದಾಂದಲೆ ನಡೆಸಿ ಟಿಪ್ಪು ಸುಲ್ತಾನ್ ಅವರ ಫೋಟೋವನ್ನು ಪ್ರದರ್ಶಿಸುವಂತೆ ಒತ್ತಾಯಿಸಿದ್ದರು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ (ಎಚ್ಜೆವಿ) ಆಗಸ್ಟ್ 17 ರಂದು ದಕ್ಷಿಣ ಕನ್ನಡದಾದ್ಯಂತ 40 ಪೊಲೀಸ್ ಠಾಣೆಗಳಲ್ಲಿ ಎಸ್ಡಿಪಿಐ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಿದೆ.
ಕಳೆದ ವರ್ಷವೂ 'ವೀರ ಸಾವರ್ಕರ್ ಫ್ಲೈಓವರ್ ಪಂಪ್ ವೆಲ್' ಎಂದು ಬ್ಯಾನರ್ ಅಳವಡಿಸಲಾಗಿತ್ತು.