ಬೆಳ್ತಂಗಡಿ, ಆ.16 (DaijiworldNews/HR): ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 5000 ಕ್ಕೂ ಅಧಿಕ ಮಂದಿ ಸ್ಪರ್ಧಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಈ ಸ್ಪರ್ಧೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಎಂಬ ದಾಖಲೆ ನಿರ್ಮಿಸಿದ್ದು, ಈ ಪ್ರಶಸ್ತಿಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಮುಖ್ಯಸ್ಥರಾದ, ಡಾ. ಮನೀಶ್ ವೈಷ್ಣವ್ ಅವರು ಶಾಸಕ ಹರೀಶ್ ಪೂಂಜ ಅವರಿಗೆ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಇನ್ನು ವಾಟ್ಸ್ಯಾಪ್ ನಂಬರಿಗೆ ಸಾವಿರಾರು ಸಂದೇಶಗಳ ಮೂಲಕ ಸ್ಪರ್ಧಿಗಳು ಹಾಡಿದ ದೇಶಭಕ್ತಿ ಗೀತೆ ತಲುಪಿದ್ದು ಪ್ರತಿಯೊಬ್ಬರ ಸಂದೇಶವನ್ನು ನೋಡಿ, ಸ್ಪರ್ಧಿಗಳ ಆಧಾರ್ ಕಾರ್ಡ್ ಪರಿಶೀಲಿಸಿ 5000ದಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದ 3500 ಸ್ಪರ್ಧಿಗಳನ್ನು ಸ್ಪರ್ಧೆಯ ನಿಯಮಾನುಸಾರ ಗಣನೆಗೆ ತೆಗೆದುಕೊಳ್ಳಲಾಗಿದ್ದು, ಒಂದೇ ತಾಲೂಕಿನ 3500 ಜನರು ಆನ್ಲೈನ್ ಮೂಲಕ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಎಂಬ ದಾಖಲೆ ನಿರ್ಮಿಸಿದೆ.