ಮಂಗಳೂರು, ಆ.16 (DaijiworldNews/HR): ತಾಲಿಬಾನ್ ಮತಾಂಧ ಸಂಘಟನೆಯಿಂದ ಪ್ರೇರಿತಗೊಂಡು ದೇಶದಲ್ಲಿಯೂ ಕಾನೂನು ಮುರಿಯುವ ದುಸ್ಸಾಹಕ್ಕೆ ಕೈ ಹಾಕಿದರೆ ನಿಮ್ಮನ್ನು ಮಟ್ಟ ಹಾಕಲು ಸರಕಾರ ಬದ್ದವಾಗಿದೆ ಎಂದು ಶಾಸಕ ಡಾಮಭರತ್ ಶೆಟ್ಟಿ ವೈ ಎಚ್ಚರಿಕೆ ನೀಡಿದ್ದಾರೆ.
ಕಬಕದಲ್ಲಿ ಸ್ವಾತಂತ್ರ್ಯ ರಥವನ್ನು ತಡೆದು ವೀರ ಸಾವರ್ಕರ್ ಫೋಟೋ ತೆಗೆದು ಮತಾಂಧ ಟಿಪ್ಪು ಫೋಟೋ ಹಾಕಬೇಕೆಂಬ ಎಸ್ಡಿಪಿಐ ಕಾರ್ಯಕರ್ತರ ನಡೆಸಿದ ದಾಂಧಲೆ ವಿಚಾರವಾಗಿ ಮಾತನಾಡಿದ ಅವರು, "ಈ ರೀತಿಯ ಕಾನೂನು ಬಾಹಿರ ಕೃತ್ಯವನ್ನು ಸಹಿಸುವುದಿಲ್ಲ. ದೇಶದಲ್ಲಿ ಕಾನೂನು,ಪಾಲಿಸಿ ಅದನ್ನು ಗೌರವಿಸಿ ಬದುಕಬೇಕು" ಎಂದರು.
ಇನ್ನು ಜಿಲ್ಲೆಯ ಸಾಮರಸ್ಯವನ್ನು ಕೆದಡಲು ಈ ಸಂಘಟನೆ ಮುಂದಾಗಿದ್ದು, ತಾಲಿಬಾನ್ನಿಂದ ಪ್ರೇರಿತಗೊಂಡು ದೇಶದ ಕಾನೂನು ಧಿಕ್ಕರಿಸಿದರೆ ತಕ್ಕ ಶಾಸ್ತಿ ಮಾಡುತ್ತೇವೆ. ನಮ್ಮ ಸಹನೆಯನ್ನು ಪರಿಶೀಲಿಸುವ ಕೆಲಸವನ್ನು ಖಂಡಿತಾ ಮಾಡದಿರಿ" ಎಂದು ಎಚ್ಚರಿಕೆ ನೀಡಿದ್ದಾರೆ.