ಮಂಜೇಶ್ವರ, ಆ 15 (DaijiworldNews/SM): ಕೇರಳ - ಕರ್ನಾಟಕ ಗಡಿಯಲ್ಲಿ ಕರ್ನಾಟಕ ಸರಕಾರ ನಿರ್ಬಂಧ ಕ್ರಮವನ್ನು ಖಂಡಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸ್ವಾತಂತ್ರ್ಯ ದಿನದಂದು ನಿರಾಹಾರ ಸತ್ಯಾಗ್ರಹ ನಡೆಸಿದರು.
'ಒಂದೇ ಭಾರತ ಒಂದೇ ಜನತೆ' ಎಂಬ ಸಂದೇಶದೊಂದಿಗೆ ತಲಪಾಡಿ ಗಡಿಯಲ್ಲಿ ನಡೆದ ಸತ್ಯಾಗ್ರಹವನ್ನು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಉದ್ಘಾಟಿಸಿದರು. ಕೋವಿಡ್ ಹೆಸರಲ್ಲಿ ಅಂತಾರಾಜ್ಯ ಸಂಚಾರ ನಿರ್ಬಂಧ ಗೊಳಿಸುವ ಕರ್ನಾಟಕರ ಸರಕಾರದ ನಿಲುವು ಜನರ ಸಂಚಾರ ಸ್ವಾತಂತ್ರ್ಯವನ್ನು ಕಸಿಯುವಂತಹದ್ದಾಗಿದ್ದು , ಕೂಡಲೇ ನಿರ್ಬಂಧವನ್ನು ಹಿಂದೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷದ , ಧಾರ್ಮಿಕ , ಸಾಮಾಜಿಕ ವಲಯದ ಮುಖಂಡರು , ಕಾರ್ಯಕರ್ತರ ಬೆಂಬಲ ಲಭಿಸಿತು.