ಮೂಡುಬಿದಿರೆ, ಆ 14 (DaijiworldNews/MS): ಮೂಡುಬಿದಿರೆಯ ಹದಿನೆಂಟು ಬಸದಿಗಳಲ್ಲಿ ಕೊವೀಡ್ ಕಾರಣದಿಂದ ಸರಳವಾಗಿ ನಾಗರ ಪಂಚಮಿ ಆಚರಿಸಲಾಯಿತು.
ಬಸದಿ ಗಳಲ್ಲಿ ಜಲ, ಕೆಸರ ,ಹಾಲು, ಅರಳು ಚಂದನ ಸಹಿತ ಹದಿನಾರು ಉಪಚಾರ ಪೂಜೆಯನ್ನು ನಾಗ ಪಂಚಮಿ ನೆರವೇರಿಸಲಾಗುತ್ತದೆ. ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ನಾಗ ಪಂಚಮಿ ಪೂಜೆಯಲ್ಲಿ ಪಾಲ್ಗೊಂಡರು.
ಜಿನ ಶಾಸನ ರಕ್ಷಕ ದೇವತೆಗಳಾದ ಸಂಪತ್ತಿನ ಒಡೆಯರೊನಾಗ ದೇವತಾನ್ವಯದಲ್ಲಿ ಹುಟ್ಟಿದವರೊ ಆದ ಕೂಲಿಶ, ವಾಸುಕಿ, ಶಂಖ ಪಾಲ, ಕರ್ಕೋಟಕ, ಪದ್ಮ, ತಕ್ಷಕ, ಚಕ್ರಿ, ಅನಂತಎಂಬ ಅಷ್ಟ ವಿಧ ನಾಗ ದೇವತೆ ಗಳನ್ನು ಸಮಸ್ತ ವಿಗ್ನ ಪರಿಹಾರ ನಿಮಿತ್ತ ಶಾಸ್ತ್ರೋಕ್ತವಾದ ರೀತಿಯ ಲ್ಲಿ ಪೂಜಿಸುವ ಪದ್ದತಿ ಬಸದಿಗಳಲ್ಲಿ ಆಚರಣೆ ಯಲ್ಲಿದೆ. ಅರುವತ್ತು ಸಾವಿರ ನಾಗಕುಲಗಳು ಜಿನೇಂದ್ರ ಭಕ್ತ ರಾಗಿದ್ದು ಜಿನ ಅಭಿಷೇಕ ನಿರ್ವಿಗ್ನ ಸಮಾಪ್ತಿಗಾಗಿ ಮಹಾ ಶಾಂತಿಧಾರದಲ್ಲಿ ನಾಗಗಳಿಗೆ ಪ್ರಿಯವಾದ ಅಭಿಷೇಕ ನಾಡಿನ ಶಾಂತಿ ಸುಭಿಕ್ಷೆ ಗೆ ಕಾರಣವಾಗಲಿ ಎಂದು ನೆರವೇರಿಸಲಾಗುತ್ತದೆ.