ಮಂಗಳೂರು, ಆ 14 (DaijiworldNews/MS): ಬಿದ್ದು ಸಿಕ್ಕಿದ್ದ ಬೆಳಬಾಳುವ ಚಿನ್ನದ ಕರಿಮಣಿ ಸರವನ್ನು ಯುವಕನೋರ್ವ ಅದರ ವಾರೀಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಾತಿನಿಧಿಕ ಚಿತ್ರ
ನಗರದ ಕೊಡಿಯಾಲ್ ಬೈಲ್ ನ ಬೆಸೆಂಟ್ ಸಂಕೀರ್ಣದ ವಠಾರದಲ್ಲಿ ಗುರುವಾರ ಮಂಗಳೂರು ಸ್ಟೇಷನರಿ ಮಾರ್ಟ್ ಸಂಸ್ಥೆಯ ಉದ್ಯೋಗಿ ನಿತಿನ್ ಪೂಜಾರಿ ಕೋಡಿಕಲ್ ಅವರಿಗೆ ಅವರಿಗೆ ಸುಮಾರು 1.5 ಲಕ್ಷ ರೂ. ಮೌಲ್ಯದ ಕರಿಯಮಣಿ ಸರ ಸಿಕ್ಕಿತ್ತು. ಕೂಡಲೇ ಅದರ ಬಗ್ಗೆ ಮಾಹಿತಿ ನೀಡಿ ಅದರ ವಾರೀಸುದಾರರಾದ ಬೆಸೆಂಟ್ ಪ.ಪೂಕಾಲೇಜಿನ ಉಪನ್ಯಾಸಕಿಗೆ ಹಿಂದಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ.