ಕೋಟ, ಆ. 13 (DaijiworldNews/SM): ಐರೋಡಿ ಗ್ರಾ.ಪಂ ವ್ಯಾಪ್ತಿಯ ಮಾಬುಕಳ ರಾಷ್ಟ್ರೀಯ ಹೆದ್ದಾರಿ ಸಮೀಪ ಹೆಬ್ಬಾರ್ ಕಾಂಪ್ಲೆಕ್ಸ್ನಲ್ಲಿರುವ ಕೆನರಾ ಬ್ಯಾಂಕ್ ಎಟಿಎಮ್ ಕಳವಿಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ಮುಂಜಾನೆ ಈ ಕಳವು ಯತ್ನ ನಡೆದಿರುವ ಶಂಕೆ ಪೊಲೀಸ್ ಇಲಾಖೆ ವ್ಯಕ್ತಪಡಿಸಿದೆ. ಕೆನರಾ ಬ್ಯಾಂಕ್ ಹಂಗಾರಕಟ್ಟೆ ಶಾಖೆ ಸಂಬಂಧಿಸಿದ ಈ ಎಟಿಎಮ್ನಲ್ಲಿ ಸೆಕ್ಯುರಿಟಿ ಗಾರ್ಡ್ ಕಣ್ಗಾವಲು ಇರದಿದ್ದು ಕಳವು ಯತ್ನಕ್ಕೆ ಸುಲಭ ದಾರಿಯಗಿದೆ.
ಹಣ ಕಳವು ಯತ್ನ ವಿಫಲ
ಈ ಎಟಿಎಮ್ನಲ್ಲಿ ಕಳವು ಮಾಡುವ ಮೊದಲೆ ಅಲ್ಲಿರುವ ಸಿಸಿ ಕ್ಯಾಮರದ ಇಲೆಕ್ಟ್ರಲ್ ಕೇಬಲ್ಗಳನ್ನು ಕತ್ತರಿಸಿ ಒಳಗೆ ನುಗ್ಗಿದ ಕಳ್ಳರು ಒಳಗಿರುವ ಡಿವಿಆರ್ ಅನ್ನು ಹೊತ್ಯೊಯ್ದಿದ್ದಾರೆ.ಅಲ್ಲದೆ ಹಣವಿರುವ ಯಾವುದೇ ಪೆಟ್ಟಿಗೆಗಳಿಗೆ ಹಾನಿ ಮಾಡದೆ ರಿಜೆಕ್ಟೆಡ್ ಬ್ವಾಕ್ಸ್ ಓಪನ್ ಗೊಳಿಸಿ ಅದರಲ್ಲಿರುವ ಅಂದಾಜು 1200ರೂ ಅನ್ನು ಕೊಂಡ್ಯೊಯ್ದಿರುವ ಮಾಹಿತಿ ಪೊಲೀಸ್ ಇಲಾಖೆಯಿಂದ ತಿಳಿದು ಬಂದಿದೆ.
ಎ.ಟಿ.ಎಮ್ ಸೆಕ್ಯುರಿಟಿ ಗಾರ್ಡ್ ಇಲ್ಲ:
ಸಾಮಾನ್ಯವಾಗಿ ಕೋಟ ಸಾಲಿಗ್ರಾಮ,ಸಾಸ್ತಾನ ತೆಕ್ಕಟ್ಟೆ ವ್ಯಾಪ್ತಿಯಲ್ಲಿರು ಎಟಿಎಮ್ನಲ್ಲಿ ಸೆಕ್ಯುರಿಟಿಗಾರ್ಡ್ ಬಳಕೆಮಾಡಿಕೊಳ್ಳದಿರುವ ಬಗ್ಗೆ ಆ ವ್ಯಾಪ್ತಿಯ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ಪ್ರತಿಯೊಂದು ಎಟಿಎಮ್ಗಳಲ್ಲಿ ಸೆಕ್ಯುರಿಟಿ ಗಾರ್ಡ್ ನೇಮಿಸಿಕೊಳ್ಳಲು ಈ ಹಿಂದೆ ಆದೇಶಿಸಿತ್ತು ಆದರೆ ಬ್ಯಾಂಕ್ ಗಳು ಇದರ ನಿಯಮ ಉಲ್ಲಂಘಿಸಿರವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಳಕ್ಕೆ ಕೈಬೆರಳಚ್ಚು ತಜ್ಞರು ಹಾಗೂ ಎಡಿಷನಲ್ ಎಸ್ಪಿ ಭೇಟಿ:
ಕಳವು ನಡೆದ ಸ್ಥಳಗಳಿಗೆ ಬೆರಳಚ್ಚು ತಜ್ಞರು ಹಾಗೂ ಉಡುಪಿ ಎಡಿಷನಲ್ ಎಸ್ಪಿ ಕುಮಾರಚಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬ್ರಹ್ಮಾವರ ಸರ್ಕಲ್ ಅನಂತಪದ್ಮನಾಭ,ಎಸ್ ಐ ಗುರುನಾಥ್ ಬಿ ಹಾದಿಮನಿ,ಕೋಟ ಕ್ರೈಂ ಎಸ್ ಐ ಪುಷ್ಭರಾಮ್,ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ, ಡಿವೈಎಸ್ಪಿ ಸುಧಾಕರ್ ನಾಯ್ಕ್,ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಮನೋಜ್ ಕಾಮತ್, ಎಜಿಎಂ ಜಗದೀಶ್ ಶೈಣೆ, ಬ್ಯಾಂಕ್ ಮ್ಯಾನೇಜರ್ ಶಿಲ್ಪಾ ಕೆ ,ಸಿಬ್ಬಂದಿಗಳು ಉಪಸ್ಥಿತರಿದ್ದರು.