ಕಾಸರಗೋಡು, ಆ.13 (DaijiworldNews/HR): ಕೊಲ್ಲಂನಲ್ಲಿ ನಡೆದ ಬೈಕ್ ಮತ್ತು ಕಾರಿನ ನಡುವಿನ ಅಪಘಾತದಲ್ಲಿ ಕಾಞ೦ಗಾಡ್ ನಿವಾಸಿಯಾದ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.
ಮೃತಪಟ್ಟವರನ್ನು ಕಾಞ೦ಗಾಡ್ ಅಲಾಮಿಪಳ್ಳಿಯ ಚೈತನ್ಯ (20) ಮತ್ತು ಸಹಪಾಠಿ ಕೊಲ್ಲಂ ಕುಂಡರದ ಬಿ.ಎನ್ ಗೋವಿಂದ್ (20) ಎಂದು ಗುರುತಿಸಲಾಗಿದೆ.
ಇಬ್ಬರು ತಿರುವನಂತಪುರ ಸಿಇ ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕೊಲ್ಲಂ-ಚೆಂಗೋಟ್ ರಾಷ್ಟ್ರೀಯ ಹೆದ್ದಾರಿಯ ಕಾನಿಕ್ಕೋಡ್ ಎಂಬಲ್ಲಿ ಅಪಘಾತ ನಡೆದಿದೆ.
ಪರೀಕ್ಷೆ ಕಳೆದು ಐದು ಬೈಕ್ ಗಳಲ್ಲಿ ಹತ್ತು ಮಂದಿ ಪ್ರವಾಸಕ್ಕೆ ತೆರಳಿ ಮರಳುತ್ತಿದ್ದಾಗ ಒಂದು ಬೈಕ್ ಅಪಘಾತಕ್ಕೀಡಾಗಿದ್ದು, ಕಾರು ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ನಡೆದಿದೆ. ಅತೀ ವೇಗದಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.