ಮಂಗಳೂರು, ಆ 13 (DaijiworldNews/MS): ಕೋಮುವಾದದ ಅಫೀಮಿನ ಅಮಲಿನಲ್ಲಿರುವವರು ಮಾತ್ರ ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿ ಹುಕ್ಕಾ ಬಾರ್ ಮಾಡಿ ಎನ್ನುವ ಹೇಳಿಕೆ ನೀಡಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ಮಾಜಿ ಸಚಿವ ಯುಟಿ ಖಾದರ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷ ಹಸಿದವರಿಗೆ, ಬಡವರಿಗೆ ಅನ್ನ ನೀಡಿ ಸಹಾಯ ಮಾಡಿದ ಪಕ್ಷ. ಅದು ನಮ್ಮ ಸಂಸ್ಕೃತಿ. ಅವರ ಹೇಳಿಕೆಯು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಲೇವಡಿ ಮಾಡಿದ ಅವ್ರು, ವಾಜಪೇಯಿ ಹೆಸರಿನ ಯೋಜನೆಯ ಹೆಸರುಗಳನ್ನು ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಬದಲಿಸಿರಲಿಲ್ಲ. ಹೊಸ ಯೋಜನೆ ಮಾಡಿ ಅದಕ್ಕೆ ಹೊಸ ಹೆಸರಿಡಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ.ಈ ಹಿಂದೆ ಮಾಡಿರುವ ವಾಜಪೇಯಿ ವಸತಿ ಯೋಜನೆಯಲ್ಲಿ ಬಡವರಿಗೆ ಎಷ್ಟು ಜನರಿಗೆ ವಸತಿ ನೀಡಲಾಗಿದೆ ಎನ್ನುವುದನ್ನು ಬಿಜೆಪಿ ಬಹಿರಂಗ ಪಡಿಸಲಿ ಎಂದು ಯು.ಟಿ.ಖಾದರ್ ಸವಾಲೆಸೆದಿದ್ದಾರೆ.