ಕಾಸರಗೋಡು, ಆ. 11 (DaijiworldNews/SM): ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನೋರ್ವನನ್ನು ಕಾಸರಗೋಡು ಪೊಲೀಸರು ಪೋಕ್ಸೋ ಕಾಯ್ದೆಯಂತೆ ಬಂಧಿಸಿದ್ದಾರೆ.
ಬಂಧಿತನನ್ನು ವಿದ್ಯಾನಗರ ನೆಲ್ಕಳ ಕಾಲನಿಯ ವಿಷ್ಣು ಪ್ರಸಾದ್(20) ಎಂದು ಗುರುತಿಸಲಾಗಿದೆ. 2021ರ ಮಾರ್ಚ್ ನಲ್ಲಿ ಕೃತ್ಯ ನಡೆದಿತ್ತು. ಬಾಲಕಿಗೆ ಆಮಿಷ ತೋರಿಸಿ ದೌರ್ಜನ್ಯ ನಡೆಸಲಾಗಿತ್ತು.
ದೌರ್ಜನ್ಯ ಬಗ್ಗೆ ಬಾಲಕಿ ಮನೆಯವರಿಗೆ ತಿಳಿಸಿದ್ದು, ಬಳಿಕ ಚೈಲ್ಡ್ ಲೈನ್ ಗೆ ದೂರು ನೀಡಲಾಗಿತ್ತು. ಈ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.