ಉಡುಪಿ, ಆ.11 (DaijiworldNews/HR): ಕೊಂಕಣ ರೈಲ್ವೇ ಬಳಕೆದಾರರಿರುವ ಎಲ್ಲಾ ರಾಜ್ಯಗಳಲ್ಲೂ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯ ವಿಲೀನದ ಬೇಡಿಕೆಗೆ ಬಾರೀ ಬೆಂಬಲ ವ್ಯಕ್ತವಾಗಿದ್ದು, ರೈಲ್ವೇ ಸಚಿವಾಲಯವೂ ವಿಷಯವನ್ನು ಪರಿಗಣಿಸಿರುವ ಹಿನ್ನೆಲೆಯಲ್ಲಿ ಕೆಲವರು ಹುನ್ನಾರ ನಡೆಸಿ ಕೊಂಕಣ ರೈಲ್ವೆಗೆ ನಿಗಮವಾಗಿಯೇ ಇರುವ ಪ್ರಯತ್ನಕ್ಕೆ ಬೆಂಬಲ ಪಡೆಯುವ ಉದ್ದೇಶದಿಂದ ಸಂಸದ ಈರಣ್ಣ ಕಡ್ಡಾಡಿ ಹಾಗೂ ಕೊಂಕಣ ರೈಲ್ವೆ ಸ್ತಾಪಕ ಇಂಜಿನಿಯರ್ ಶ್ರೀಧರನ್ ಬಳಿ ಕೊಂಕಣ ರೈಲ್ವೆ ಯಾಕೆ ವಿಲೀನವಾಗ ಬಾರದು ಎಂಬ ಪ್ರಶ್ನೆ ಕೇಳಿ, ಕೊಂಕಣ ರೈಲ್ವೆಯ ವೈಪಲ್ಯದ ಬಗ್ಗೆ ಹೇಳದೆ, ನಂತರ ಕೇವಲ ತಮಗೆ ಬೇಕಾದ ಉತ್ತರ ಪಡೆದು ಅಂತರ್ಜಾಲದಲ್ಲಿ ಹರಿಯ ಬಿಟ್ಟಿರುವುದು ಕರಾವಳಿಗರ ಗಮನಕ್ಕೆ ಬಂದಿದೆ ಎಂದು ಕರಾವಳಿ ರೈಲ್ವೇ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡೆಸಿದ್ದಾರೆ.
ಈ ಬಗ್ಗೆ ಸಂಸದ ಈರಣ್ಣ ಕಡ್ಡಾಡಿ ಹಾಗೂ ಶ್ರೀಧರನ್ ಬಳಿ ತಮ್ಮ ಪ್ರತಿನಿಧಿಗಳ ಮೂಲಕ ನೇರ ಸಂಪರ್ಕಿಸಿ ವಿಷಯ ಮನವರಿಕೆ ಮಾಡಿದ್ದಲ್ಲದೇ, ಕೊಂಕಣ ರೈಲ್ವೆ ಅನ್ಯಾಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಈರಣ್ಣ ಕಡ್ಡಾಡಿ, "ಕರಾವಳಿ ಜನರಿಗೆ ಕೊಂಕಣ ರೈಲ್ವೆಯಿಂದಾದ ಅನ್ಯಾಯಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ನೀಡಿದ ಅಭಿಪ್ರಾಯ ಅದಾಗಿದ್ದು, ಸದಾ ಕರಾವಳಿ ಜನರ ಜತೆ ತಾವಿರುವುದಾಗಿಯೂ,ಕರಾವಳಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸುವುದಾಗಿಯೂ ತಿಳಿಸಿದ್ದಾರೆ ಹಾಗೂ ವಿಲೀನದ ಬಗ್ಗೆ ಕರಾವಳಿ ಜನರ ಬೇಡಿಕೆಗಳನ್ನು ಅದ್ಯಯನ ಮಾಡಿ ಸಚಿವಾಲಯಕ್ಕೆ ತಿಳಿಸುವುದಾಗಿಯೂ" ಹೇಳಿದ್ದಾರೆ.
ಕರಾವಳಿಗರಿಗೆ ಪ್ರತಿಕ್ರಿಯೆ ನೀಡಿದ ಶ್ರೀಧರನ್, "ಸ್ವತಂತ್ರ ನಿಗಮವಾಗಿದ್ದರೆ ಜನರಿಗೆ ಅನುಕೂಲ ಎಂಬ ಅಬಿಪ್ರಾಯ ತನಗೆ ಬಹು ಹಿಂದೆ ನಿಗಮದ ನಿರ್ಮಾಣದ ಹಿಂದೆ ಇದ್ದಿದ್ದು,ಸಂಸ್ಥೆ ಯ ಬಗ್ಗೆ ಜನರಿಗೆ ಈಗ ಮೂಡಿರುವ ಅಭಿಪ್ರಾಯ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕರು ಸಚಿವಾಲಯಕ್ಕೆ ತೆರಳುವ ಮೂಲಕ ತಮಗಾದ ಅನ್ಯಾಯಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು,ಹಾಗು ಕೊಂಕಣ ರೈಲ್ವೆ ಹಲವು ವರ್ಷಗಳ ನಷ್ಟವಾಗದೇ ನಡೆಯುತಿತ್ತು ಆದ್ದರಿಂದ ಆ ಕಾರಣಗಳಿಂದ ಯಾರೂ ಸೇವೆಯನ್ನು ನಿರಾಕರಿಸಬಾರದು" ಎಂದು ತಿಳಿಸಿದ್ದಾರೆ.
ಕುಂದಾಪುರ ರೈಲ್ವೇ ಸಮಿತಿಯ ಶ್ರೀಗಣೇಶ್ ಪುತ್ರನ್, "ಸಮಿತಿಯು ಜನಾಂಧೊಲನ ರೂಪಿಸುವಲ್ಲಿ ನಿರತವಾಗಿದ್ದು, ಒಂದೋ ಬೇಡಿಕೆ ಈಡೇರಿಸ ಬೇಕು ಇಲ್ಲವೇ ಕೊಂಕಣ ರೈಲ್ವೆ ಭಾರತೀಯ ರೈಲ್ವೆ ಜತೆ ವಿಲೀನವಾಗಬೇಕು, ಹಾಗೂ ವಿಲೀನ ಪ್ರಕ್ರಿಯೆ ಈಡೇರುವವರೆಗೆ ಸಂಸ್ತೆಯ ಆಡಳಿತ ಸಂಪೂರ್ಣವಾಗಿ ಪುನರ್ ರಚನೆ ಮಾಡಿ ಹೊಸ ಜನಪರ ಅದಿಕಾರಿಯನ್ನು ನೇಮಿಸಲೇಬೇಕು" ಎಂದು ತಿಳಿಸಿದ್ದಾರೆ.