ಮಂಗಳೂರು, ಆ 11 (DaijiworldNews/MS): ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಯೋರ್ವನಿಗೆ ಅನನಾಸಿನ ಒಳಗಿಟ್ಟು ಗಾಂಜಾ ನೀಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರಾಗೃಹದಲ್ಲಿರುವ ರಾಜು ಯಾನೆ ರಾಜಪ್ಪ ಎನ್ನುವ ವಿಚಾರಣಾಧೀನ ಕೈದಿಗೆ ನೀಡಲೆಂದು ಆಗಸ್ಟ್ 9ರ ಬೆಳಗ್ಗೆ ಅಬ್ದುಲ್ ಮಜೀದ್ ಬಿನ್ ಅಬ್ದುಲ್ ಖಾದ್ರಿ ಎನ್ನುವಾತ ಅನನಾಸು ಹಣ್ಣು ತಂದಿದ್ದ. ಜೈಲಿನ ಪ್ರವೇಶದ್ವಾರದ ಬಳಿ ಎಕ್ಸರೇ ಬ್ಯಾಗಿನಲ್ಲಿ ಹಣ್ಣನ್ನು ಪರಿಶೀಲಿಸಿದಾಗ ಹಣ್ಣಿನೊಳಗೆ ಅನುಮಾನಾಸ್ಪದ ವಸ್ತು ಇರುವುದು ಗೊತ್ತಾಯಿತು. ಅದನ್ನು ಒಡೆದು ನೋಡಿದಾಗ ಅದರೊಳಗೆ ಪ್ಲಾಸ್ಟಿಕ್ ನಲ್ಲಿ ಗಾಂಜಾದಂತೆ ತೋರುವ ವಸ್ತು ಪತ್ತೆಯಾಗಿದೆ. ಅಬ್ದುಲ್ ಮಜೀದ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಪ್ರಕರಣ ದಾಖಲಾಗಿದೆ.