ಕಾರ್ಕಳ, ಆ. 10 (DaijiworldNews/SM): ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಡಿಮೆ ಅಂಕ ಲಭಿಸಿದೆ ಎಂಬ ಕಾರಣಕ್ಕಾಗಿ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಾಬೆಟ್ಟು ಹವಲ್ದಾರ್ ಬೆಟ್ಟುನಲ್ಲಿ ನಡೆದಿದೆ.
ಹವಾಲ್ದಾರ್ ಬೆಟ್ಟು ಹಾಡಿಮನೆಯ ಅಗ್ನೀಶ್ ಕುಮಾರ್(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆಗಸ್ಟ್ ೧೦ರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದೇವರ ಕೋಣೆಯ ಕಬ್ಬಿಣದ ಹುಕ್ಗೆ ಬಟ್ಟೆಯಿಂದ ನೇಣುಬಿಗಿದು ಆತ್ಮಹತ್ಯೆಗೈದಿದ್ದಾನೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.