ಉಡುಪಿ,ಆ.10(DaijiworldNews/HR): ಉಡುಪಿಯ ಶಿರಿಬೀಡುವಿನಲ್ಲಿರುವ ಸೃಷ್ಟಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಗೆ ನಕಲಿ ವಿಳಾಸದ ದಾಖಲೆ, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಐಡಿ ದಾಖಲೆಗಳನ್ನು ಕೊಟ್ಟು ಆರು ಮಂದಿ ಆರೋಪಿಗಳು ಸೊಸೈಟಿಯಿಂದ ಒಟ್ಟು 6,86,557 ರೂಪಾಯಿ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶ್ರೀರಾಮ ಉಪಾಧ್ಯ ದೂರು ನೀಡಿದ್ದಾರೆ.
ಸಾಂಧರ್ಭಿಕ ಚಿತ್ರ
ವಂಚನೆ ಮಾಡಿದ ಆರೋಪಿಗಳನ್ನು ಮಹಮ್ಮದ್ ಆಸೀಪ್, ನೂರುದ್ದೀನ್, ಮಹಮ್ಮದ್ ಅಶ್ರಫ್, ಅನೂಪ್, ಅಬ್ದುಲ್ ಸಮೀರ್, ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದೆ.
ಈ ಆರು ಆರೋಪಿಗಳು ಸೇರಿಕೊಂಡು ಸೃಷ್ಟಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಗೆ ನಕಲಿ ವಿಳಾಸದ ದಾಖಲೆ, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಐಡಿ ಪ್ರೂಪ್ಗಳನ್ನು ಸೃಷ್ಟಿಸಿ ಜುಲೈ 23ರಂದು 2,34,910 ರೂಪಾಯಿ ನಗದನ್ನು ಹಾಗೂ ಜುಲೈ 30ರಂದು 2,20,890 ರೂಪಾಯಿಗಳನ್ನು ಮತ್ತು ಜುಲೈ 31ರಂದು 2,30,744 ರೂಪಾಯಿಯನ್ನು ನಕಲಿ ಖಾತೆಗೆ ವರ್ಗಾಯಿಸಿಕೊಂಡು ಸೊಸೈಟಿಯಿಂದ ಒಟ್ಟು 6,86,557 ರೂಪಾಯಿ ಹಣವನ್ನು ಪಡೆದು ಸೊಸೈಟಿಗೆ ಮೋಸ ಮಾಡಿದ್ದು, ಆರೋಪಿ ಮಹಮ್ಮದ್ ಆಸೀಪ್ ಆಗಸ್ಟ್ 09ರಂದು ಸೊಸೈಟಿಗೆ ಚೆಕ್ ತೆಗೆದುಕೊಂಡು ಹೋಗಲು ಬಂದಿದ್ದು ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.