ಕಾಸರಗೋಡು, ಆ 10 (DaijiworldNews/MS): ಮೀನುಗಾರಿಕೆ ನಡೆಸುತ್ತಿದ್ದಸಂದರ್ಭದಲ್ಲಿ ದೋಣಿ ನದಿಯಲ್ಲಿ ಮುಳುಗಿ ಮೀನುಗಾರೋರ್ವರು ಮೃತಪಟ್ಟ ಘಟನೆ ಉದುಮ ಸಮೀಪದ ಹೊಳೆಯಲ್ಲಿ ನಡೆದಿದೆ. ಚೆಂಬರಿಕ ದ ಅಮು (60) ಮೃತಪಟ್ಟವರು.
ಇಂದು ಬೆಳಿಗ್ಗೆ ನದಿಯಲ್ಲಿ ಮೀನು ಹಿಡಿಯಲು ಬಲೆ ಬೀಸುತ್ತಿದ್ದಾಗ ದೋಣಿ ಮಗುಚಿ ಈ ದುರಂತ ನಡೆದಿದೆ. ಪರಿಸರ ವಾಸಿಗಳು ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಲಿಲ್ಲ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ