ಉಡುಪಿ, ಆ 10 (DaijiworldNews/PY): ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆಯ ಒಟ್ಟು 11 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಉಡುಪಿಯ ಒಳಕಾಡು ಶಾಲೆಯ ಅಭಿಷೇಕ ಜಯಂತ ಹೊಳ್ಳ, ಕುಂದಾಪುರ ವಿ.ಕೆ.ಆರ್ ಆಚಾರ್ಯದ ಅನುಶ್ರೀ ಶೆಟ್ಟಿ, ಶಂಕರನಾರಾಯಣ ಮದರ್ ತೆರೆಸಾ ಶಾಲೆಯ ಅನುಶ್ರೀ ಶೆಟ್ಟಿ, ಕುಂಜಿಬೆಟ್ಟು ಟಿ.ಎ ಪೈ ಆಂಗ್ಲಮಾಧ್ಯಮ ಶಾಲೆಯ ನವನೀತ ಎಸ್ ರಾವ್, ಕುಂದಾಪುರ ವಿ.ಕೆ ಆರ್ ಆಚಾರ್ಯದ ಪ್ರಣೀತ, ನೃಜನ್ ಆರ್ ಭಟ್, ಉಡುಪು ಶ್ರೀ ಅನಂತೇಶ್ವರದ ಶಾಲೆಯ ಪ್ರತೀಕ್ಷಾ ಪೈ, ಉಡುಪಿ ಸ.ಪ.ಪೂ ಬಾಲಕಿಯರ ಕಾಲೇಜಿನ ಸಮತಾ ಹೆಚ್ ಎಸ್, ಮಲ್ಪೆ ನಾರಾಯಣ ಗುರು ಶಾಲೆಯ ಸಾತ್ವಿಕ ಪಿ ಭಟ್, ಗಂಗೊಳ್ಳಿ ಸ್ಎಟೆಲ್ಲಾ ಮೇರಿ ಪ್ರೌಢಶಾಲೆಯ ಶ್ರೇಯಾ, ಕೋಟ ವಿವೇಕ ಪ.ಪೂ ಕಾಲೇಜಿನ ಶ್ರೀನಿಧಿ 625ಕ್ಕೆ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 1,339 ವಿದ್ಯಾರ್ಥಿಗಳು ಎ+ ಗ್ರೇಡ್, 2,260 ವಿದ್ಯಾರ್ಥಿಗಳು ಎ ಗ್ರೇಡ್, 5,863 ವಿದ್ಯಾರ್ಥಿಗಳು ಬಿ ಗ್ರೇಡ್ ಹಾಗೂ 3,858 ವಿದ್ಯಾರ್ಥಿಗಳು ಸಿ ಗ್ರೇಡ್ ಪಡೆದಿದ್ದಾರೆ.