ಕಾರ್ಕಳ, ಆ.09 (DaijiworldNews/HR): ನಾನು ಹಗರಣಗಳನ್ನ ಹೊರ ತೆಗೆಯಲು ಬಂದ ಸಚಿವ ಅಲ್ಲ. ನಾನು ಕರ್ನಾಟಕದಲ್ಲಿ ಸುಧಾರಣೆ ತರಲು ಬಂದಿರುವ ಸಚಿವ ಹಾಗಾಗಿ ಇಲಾಖೆಯಲ್ಲಿ ಸಾಧ್ಯವಾಗುವ ಸುಧಾರಣೆ ಯನ್ನು ಸೀಮಿತ ಅವಧಿಯಲ್ಲಿ ಮಾಡಲು ಪ್ರಯತ್ನಿಸ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿಯವರ ಬೇರೆ ಪಕ್ಷದೊಂದಿಗಿನ ಗೆಳೆತನ ತಪ್ಪಾ ಸರಿಯಾ? ಎಂದು ಮಧ್ಯಮ ಪ್ರಶ್ನೆಗೆ "ಪ್ರೆಂಡ್ ಶಿಪ್ ಎಂದು ಯಾವುದೇ ರೀತಿಯದ್ದಾಗಿರಬಹುದು. ಆದರೆ ಬದ್ದತೆಯಲ್ಲಿ, ಕಾರ್ಯಶೈಲಿಯಲ್ಲಿ ವ್ಯತ್ಯಾಸ ಬಾರದು. ಪ್ರೆಂಡ್ ಶಿಪ್ ಎಲ್ಲರಿಗೂ ಇರುತ್ತೆ. ಅದಲ್ಲೇನು ವ್ಯತ್ಯಾಸ ಆಗಲ್ಲ, ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿ ಬಿಆರ್ಎಸ್ನ ಸಿಬ್ಬಂದಿಗಳಿಗೆ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಬುಧವಾರದಿಂದ ಅನಿಷ್ಟಾವಧಿವರೆಗೆ ಧರಣಿ ಕುಳಿತು ಕೊಳ್ಳವ ಎಚ್ಚರಿಕೆ ನೀಡುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಬಿ ಆರ್ ಆಸ್ಪತ್ರೆಯ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ಗುರುವಾರ ಮುಖ್ಯಮಂತ್ರ್ರಿಯವರು ಮತ್ತು ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ, ಏನು ಕ್ರಮ, ಪರಿಹಾರ ತೆಗೆದುಕೊಳ್ಳಬೇಕೆಂಬುದನ್ನು ಸಭೆಯಲ್ಲಿ ನಿರ್ಧಾರ ಮಾಡ್ತೆವೆ. ಗುರುವಾರದೊಳಗೆ ಇದನ್ನು ಇತ್ಯರ್ಥ ಮಾಡುತ್ತೇವೆ" ಎಂದರು.
ಇದೀಗ ಹೊಸ ಮಂತ್ರಿಮಂಡಲ ರಚನೆಯಾಗುತ್ತಿರುವುದುರಿಂದ ಸರಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಭರವಸೆ ಇಡಿ, ಪ್ರತಿಭಟನೆಯನ್ನು ಕೈ ಬಿಡಬೇಕು ಎಂದು ಸುನಿಲ್ ವಿನಂತಿಸಿದರು.
ಸಿಬ್ಬಂದಿಗಳ ಹಿತಾಸಕ್ತಿ, ಆಸ್ಪತ್ರೆಯ ಹಿತಾಸಕ್ತಿ ಮತ್ತು ಜಿಲೆಯ ಹಿತಸಕ್ತಿ ಕಾಪಾಡೋಕೆ ನಾವು ಬದ್ದರಿದ್ದೇವೆ. ಪ್ರತಿಭಟನೆಗೆ ಮುಂದಾಗದೆ ಕೈಬಿಟ್ಟು ನಮ್ಮ ಜೊತೆಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಸಕ್ಕರೆ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಉತ್ತರಿಸಿದ ಸಚಿವ, "ತಾನು ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಕೆಯನ್ನು ತೆಗೆದುಕೊಳ್ಳುವೆ ಆಮೇಲೆ ಇಂಧನ ಇಲಾಖೆಯ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತೇನೆ. ಶುಕ್ರವಾರ ಚಾರ್ಜ್ ತೆಗೆದುಕೊಂಡ ಮೇಲೆ ಕಾರ್ಯಾರಂಭಕ್ಕೆ ತೆಗೆದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.