ಕಾಸರಗೋಡು,ಆ.09 (DaijiworldNews/MS): ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾ ನ್ ಹಾಗೂ ಜಿಲ್ಲೆಯ ಕಾಂಗ್ರೆಸ್ ಕೆಲ ಕಾಂಗ್ರೆಸ್ ನಾಯಕರ ಜೊತೆ ರೈಲಿನಲ್ಲಿ ಜಟಾಪಟಿ , ತಳ್ಳಾಟ ನಡೆದ ಘಟನೆಯೊಂದು ನಡೆದಿದೆ. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಲು ಕಾಸರಗೋಡಿನಿಂದ ಕೋಜಿಕ್ಕೋಡ್ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಹವಾನಿಯಂತ್ರಕ ಎ . ಸಿ ಬೋಗಿಗೆ ಹತ್ತಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪದ್ಮರಾಜನ್ ಐಂಗೋತ್ ಮತ್ತುಅನಿಲ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲಾಗಿದೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಶಾಸಕರಾದ ಎನ್ . ಎ ನೆಲ್ಲಿಕುನ್ನು , ಎ . ಕೆ . ಎಂ ಅಶ್ರಫ್, ಇ . ಚಂದ್ರಶೇಖರನ್ ರವರು ಸಂಸದರ ಜೊತೆಗಿದ್ದರು . ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣ ಪೆರಿಯ ಕೂಡಾ ಜೊತೆಗಿದ್ದರು. ಇವರು ತಡೆಯಲು ಯತ್ನಿದಾಗ ನೀಲೇಶ್ವರ ರೈಲು ನಿಲ್ದಾಣದಲ್ಲಿ ರೈಲಿನಿಂದ ಹಾರಿ ಪರಾರಿಯಾಗಿರುವುದಾಗಿ ಸಂಸದರು ತಿಳಿಸಿದ್ದಾರೆ. ಸಂಸದರು ನೀಡಿದ ದೂರಿನಂತೆ ಪದ್ಮರಾಜನ್ ಐಂಗೋತ್ ಮತ್ತುಅನಿಲ್ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.
ಕೆಪಿಸಿಸಿ ಕಚೇರಿಯಿಂದ ಪದ್ಮರಾಜನ್ ಕೆಲ ಕಡತಗಳನ್ನು ಕೊಂಡೊಯ್ದಿರುವುದಾಗಿ ಸಂಸದರು ಓರ್ವ ಕಾಂಗ್ರೆಸ್ ನಾಯಕರಿಗೆ ಹೇಳಿದ್ದರು ಎಂಬ ವಿಷಯ ಘಟನೆಗೆ ಕಾರಣ ಎನ್ನಲಾಗಿದೆ.
ಈ ನಡುವೆ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಬಾಲಕೃಷ್ಣ ಪೆರಿಯತಮ್ಮ ಮೇಲೆ ರೈಲಿನಲ್ಲಿ ಹಲ್ಲೆ ನಡೆಸಿರುವುದಾಗಿ ಪದ್ಮರಾಜನ್ ಐಂಗೋತ್ ಮತ್ತು ಅನಿಲ್ ಆರೋಪಿದ್ದಾರೆ.