ಕಾರ್ಕಳ, ಆ.07 (DaijiworldNews/HR): "ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನ ಮಾನ ಸಿಗಬೇಕೆಂದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಅದಕ್ಕೆ ಏನು ತೊಡಕುಗಳಿಗೆ ಎಂದು ತಿಳಿದು ತುಳು ಭಾಷೆಗೆ ಸ್ಥಾನ ಮಾನ ಸಿಗುವ ಪ್ರಯತ್ನ ಮಾಡುತ್ತೇನೆ" ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿ ಮುಖಾಂತರ ನನಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಖಾತೆ ನೀಡಿದ್ದು, ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ" ಎಂದರು.
ರಾಜ್ಯದಲ್ಲಿ ಹೊಸ ಸಚಿವರಿಗೆ ಖಾತೆ ಹಂಚಿಕೆ ಕುರಿತ ಸುದ್ದಿಗಾರರ ಪ್ರಶ್ನಿಗೆ ಪ್ರತಿಕ್ರಿಯಿಸಿದ ಅವರು, "ಸರ್ಕಾರದಲ್ಲಿ ಹೊಸತನವನ್ನು ನಿರ್ಮಿಸುವುದಕ್ಕಾಗಿ ಪಕ್ಷದ ಹಿರಿಯರು ಎಲ್ಲಾ ಇಲಾಖೆಗಳನ್ನು ಬೇರೆ ಬೇರೆ ಸಚಿವರಿಕೆ ಕೊಟ್ಟಿದ್ದು, ಅದರಂತೆ ನಾವು ಉತ್ತಮ ಕೆಲಸ ಮಾಡುತ್ತೇವೆ" ಎಂದರು.
ಇನ್ನು "ಭಾಷೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ ಭಾಷೆ ಮತ್ತು ಸಂಸ್ಕೃತಿ ಎರಡು ಒಟ್ಟಾಗಿ ಸಾಗಾಬೇಕು. ಈ ವ್ರಡನ್ನು ಸಮತೋಳನ ಮಾಡುವ ಕಾರ್ಯವನ್ನು ಮಾಡುತ್ತೇನೆ" ಎಂದು ಹೇಳಿದ್ದಾರೆ.