ಉಳ್ಳಾಲ, ಆ 07 (DaijiworldNews/MS): ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ್ ನಲ್ಲಿ ಇರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಗೋಡೆಗೆ ಕನ್ನ ಕೊರೆದು ಚಿನ್ನಾಭರಣ ಕಳ್ಳತನಕ್ಕೆ ಯತ್ನಿಸಿದ ಕಳ್ಳನ ಮುಖ ಚಹರೆ ಪತ್ತೆಯಾಗಿದೆ.
ಜ್ಯುವೆಲ್ಲರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳ್ಳ ಗೋಡೆ ಒಡೆದು ಜ್ಯುವೆಲ್ಲರಿ ಒಳಗೆ ನುಗ್ಗುವ ದೃಶ್ಯ ದಾಖಲಾಗಿದೆ. ಪೊಲೀಸರಿಂದ ಆರೋಪಿಯ ಪತ್ತೆ ಕಾರ್ಯ ಆರಂಭವಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿಯೂ ಇರಾ ಮೂಳೂರು ನಿವಾಸಿ ಎಂದು ಶಂಕಿಸಲಾಗಿದೆ. ಆರೋಪಿಗಾಗಿ ಮುಂದುವರಿದ ಶೋಧ ಮುಂದುವರಿದಿದೆ.
ಜುವೆಲ್ಲರಿಯಲ್ಲಿ ಆಧುನಿಕ ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆ ಅಳವಡಿಸಿರುವುದರಿಂದ ಆ. ೫ ರ ರಾತ್ರಿ ಕಳ್ಳತನ ನಡೆಯುತ್ತಿದ್ದಂತೆಯೇ ಮಾಲಕರ ಮೊಬೈಲ್ ರಿಂಗಣಿಸಿದೆ. ಕಳ್ಳ ಗೋಡೆ ಕೊರೆದು ಒಳನುಗ್ಗುತ್ತಿದ್ದಂತೆ ಸೈರನ್ ಮೊಳಗಿದ ಕಾರಣ ಬೆಳ್ಳಿ ಸರವನ್ನು ಎಗರಿಸಿದ ಕಳ್ಳ ಅಲ್ಲಿಂದ ಪರಾರಿಯಾಗಿದ್ದ. ಇತ್ತ 10 ನಿಮಿಷಗಳಲ್ಲಿ ಜ್ಯುವೆಲ್ಲರಿ ಮಾಲೀಕರು ಅಂಗಡಿ ತಲುಪಿದ್ದರು.
ಮುಡಿಪು: ಗೋಡೆ ಕೊರೆದು ಜ್ಯುವೆಲ್ಲರಿಯಿಂದ ಚಿನ್ನಾಭರಣ ದರೋಡೆ