ಮಂಜೇಶ್ವರ, ಆ 07 (DaijiworldNews/MS): ಕಾರಿನಲ್ಲಿ ಅಕ್ರಮ ವಾಗಿ ಸಾಗಾಟ ಮಾಡುತ್ತಿದ್ದ ದಾಖಲೆಗಳಿಲ್ಲದ 27. 46 ಲಕ್ಷ ರೂ . ವನ್ನು ಡಿವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ. ಕುಂಬ್ಡಾಜೆ ಯ ಶಿಹಾಬುದ್ದೀನ್ (28) ಬಂಧಿತ.
ಡಿ ವೈ ಎಸ್ಪಿ ಯವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ತಲಪಾಡಿಯಲ್ಲಿ ಶುಕ್ರವಾರ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಸಂಶಯ ಬಾರದಂತೆ ಪತ್ನಿ ಹಾಗೂ ಮಗುವನ್ನು ಕಾರಿನಲ್ಲಿ ಕುಳ್ಳಿರಿಸಿ ಬರುತ್ತಿದ್ದಾಗ ಅಕ್ರಮ ಹಣ ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು , ತನಿಖೆಯನ್ನು ಎನ್ಫೋರ್ಸ್ ಮೆಂಟ್ ಗೆ ವಹಿಸಲಾಗಿದೆ