ಸುಬ್ರಹ್ಮಣ್ಯ, ಆ 07 (DaijiworldNews/PY): ಸುಬ್ರಹ್ಮಣ್ಯ ಪರಿಸರದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕುಮಾರಧಾರ ನದಿಯಲ್ಲಿ ಭಾರೀ ಪ್ರವಾಹ ಹರಿದು ಸ್ನಾನಘಟ್ಟ ಮುಳುಗಡೆಯಾಗಿದೆ.
ಇನ್ನು ದರ್ಪಣತೀರ್ಥ ತುಂಬಿ ಹರಿದಿದ್ದು, ದರ್ಪಣತೀರ್ಥ ಸೇತುವೆ ಮುಳುಗಡೆಗೊಂಡಿತ್ತು. ಇದರ ಪರಿಣಾಮ ಸುಬ್ರಹ್ಮಣ್ಯ-ಪುತ್ತೂರು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಮಲೆನಾಡು ಪ್ರದೇಶದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿದಿದ್ದು, ಕುಮಾರಧಾರ ಸ್ನಾನಘಟ್ಟ ಮುಂಜಾನೆ ಮುಳುಗಡೆಗೊಂಡಿತ್ತು. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯ ನೀರಿನಿಂದ ಆವೃತಗೊಂಡಿತ್ತು. ಸ್ನಾನಘಟ್ಟದಲ್ಲಿದ್ದ ದೇವರ ಅವಭೃತ ಕಟ್ಟೆಯು ಕೂಡಾ ಭಾಗಶಃ ಮುಳುಗಡೆಗೊಂಡಿತ್ತು. ಇನ್ನು ಕುಮಾರಧಾರ ನದಿಯಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆ ಕುಲ್ಕುಂದ, ಪರ್ವತಮುಖಿ ಪರಿಸರದಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.
ಭಾರೀ ಮಳೆಯ ಪರಿಣಾಮ ಎಡಕುಮೇರಿ ಸಮೀಪ ರೈಲ್ವೆ ಹಳಿಗೆ ಬಂಡೆ ಉರುಳಿ ಸುಮಾರು ಅರ್ಧ ಗಂಟೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.