Karavali
ಕಾರ್ಕಳ: ಸಚಿವ ಸುನೀಲ್ ಕುಮಾರ್ ರಾಜಕೀಯ ಪಯಣ
- Fri, Aug 06 2021 11:17:51 AM
-
ಕಾರ್ಕಳ, ಆ.06 (DaijiworldNews/HR): ಹಿಂದುತ್ವವೇ ಮೂಲ ಮಂತ್ರ, ಅಭಿವೃದ್ಧಿಯೇ ಗುರಿ, ಯುವ ಸಮುದಾಯವೇ ರಾಷ್ಟ್ರ ಶಕ್ತಿ ಎಂಬ ತತ್ವ-ನಂಬಿಕೆಯೊಂದಿಗೆ ರಾಜಕೀಯ ರಂಗಕ್ಕೆ ಪ್ರವೇಶಿಸಿ ಯಶಸ್ಸು ಕಂಡವರು ವಿ.ಸುನೀಲ್ಕುಮಾರ್ ಅವರಾಗಿದ್ದು, 2004ರಲ್ಲಿ ಬಿಜೆಪಿಯ ಮೂಲಕ ಶಾಸಕ ಸ್ಥಾನಕ್ಕೆ ಏರಿ ಅತೀ ಕಿರಿಯ ವಯಸ್ಸಿನ ಶಾಸಕನೆಂದು ಪ್ರಜಲಿತ ಪಡೆದಿದ್ದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಗೊಂಡಿದ್ದರು. 2018 ರಲ್ಲಿ 42000ಸಾವಿರ ಮತಗಳ ಅಂತರದಿಂದ ಜಯಗೊಳಿಸಿ ಮತ್ತೆ ವಿಧಾನಸಭೆಗೆ ಪ್ರವೇಶ ಪಡೆದ ಅವರು ಸರ್ಕಾರಿ ಮುಖ್ಯ ಸಚೇತಕರಾಗಿ ನೇಮಕ ಗೊಂಡರು. ರಾಜ್ಯದಲ್ಲಿ ಉಂಟಾದ ರಾಜಕೀಯ ಬದಲಾವಣೆಯಿಂದಾಗಿ ಇದೀಗ ವಿ.ಸುನೀಲ್ಕುಮಾರ್ ಸಚಿವರಾಗಿದ್ದಾರೆ.
ವಿ.ಸುನೀಲ್ಕುಮಾರ್ ಅವರು ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಪೂರ್ವದಲ್ಲಿ ಬಜರಂಗದಳ ರಾಜ್ಯ ಸಂಚಾಲಕರಾಗಿದ್ದರು. ರಾಜ್ಯದ ಉದ್ದಗಲದಲ್ಲಿ ಸಂಚರಿಸಿ ಸಂಘಟನೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿದರು. ಉತ್ತಮ ವಾಗ್ಮಿಯಾಗಿರುವ ಅವರು ತನ್ನ ಭಾಷಣ ಕಲೆಗಾರಿಕೆಯಿಂದ ಯುವ ಸಮುದಾಯವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಚಾಕ್ಯತೆ ಹೊಂದಿದ್ದರು.
ಇನ್ನು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಕಾರ್ಕಳ ವಿಧಾನ ಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನದ ಫಲವಾಗಿ, ಬಿಜೆಪಿಯ ಸದಸ್ಯತ್ವ ಹೊಂದಿರದ ಸಂಘ ಪರಿವಾರದವವರು ಎಂಬ ಒಂದೇ ಕಾರಣದಿಂದ ವಿ.ಸುನೀಲ್ಕುಮಾರ್ ಅವರ ಹೆಸರನ್ನು ಶಾಸಕ ಅಕಾಂಕ್ಷಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಪರಿಣಾಮವಾಗಿ ಚುನಾವಣೆಯ ಫಲಿತಾಂಶ ಹೊರಬಂದಾಗ ಭಾರೀ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ತನ್ಮೂಲಕ ವಿ.ಸುನೀಲ್ಕುಮಾರ್ ವಿಧಾನಸಭೆಗೆ ಪ್ರವೇಶ ಪಡೆದರು.
ವಿ.ಸುನೀಲ್ಕುಮಾರ್ ಅವರು ಹುಟ್ಟು ಹೋರಾಟಗಾರನಾಗಿ ಅನೇಕ ಹೋರಾಟಗಳಿಗೆ ನೇತೃತ್ವವನ್ನು ವಹಿಸಿದ್ದು, ಕಾಶ್ಮೀರ ಚಲೋದಂತಹ ಹೋರಾಟಕ್ಕೆ ನಾಯಕತ್ವ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲೇ ಪ್ರಥಮ ವಿಧಾನಸಭಾಧಿವೇಶನದಲ್ಲೇ ಹೆಬ್ರಿ ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು. ತನ್ನ ಶಾಸಕತ್ವದ ಪ್ರಥಮ ಅವಧಿಯಲ್ಲೇ ಎಲ್ಲಾ ಕಾನೂನಿನ ತೊಡಕುಗಳನ್ನು ಪರಿಹರಿಸಿ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಅವಕಾಶ ವಂಚಿತರಾದ ಜನರಿಗೆ ಪರಿಹಾರ. ಆ ನೆಲೆಯಲ್ಲಿ ಅತ್ಯಂತ ಬಡವರ ಮನೆಗೆ ದಾನಿಗಳ ನೆರವಿನಿಂದ ಮೂರು ಲಕ್ಷ ಹಂಚುಗಳ ಕೊಡುಗೆ. ಆ ಪ್ರಕ್ರಿಯೆಯನ್ನು ಈ ಇಲ್ಲಿಯವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ.
ಜಾತಿ ತಾರತಮ್ಯವನ್ನು ಹೋಗಲಾಡಿಸಿ ದುಂದುವೆಚ್ಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸಾಮೂಹಿಕ ವಿವಾಹ ಪರಿಕಲ್ಪನೆಯನ್ನು ಸಾಕಾರಗೊಳಿಸಿ ತಾನೂ ಕೂಡ ಸಾಮೂಹಿಕ ವಿವಾಹದಲ್ಲೇ ಮದುವೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದು, ಕ್ಷೇತ್ರದ ಜನರ ಉಪಯೋಗಕ್ಕಾಗಿ ಉದ್ಯೋಗ ಮೇಳ ನಡೆಸಿ ಅನೇಕ ಜನರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಕಾಳಜಿವಹಿಸಿದ್ದರು.
ಹಿಂದು ಪರ ಹೋರಾಟಗಾರರಾಗಿ ರಾಜಾದಾದ್ಯಂತ ಪ್ರವಾಸ ಮಾಡಿದ್ದ ಇವರು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಪೀಠದ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ನಡೆಸಿ ಅಧಿವೇಶನದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ. ಹಿಂದುಗಳ ಆರಾಧ್ಯ ದೇವರಾದ ಶ್ರೀ ರಾಮಚಂದ್ರನೇ ನಿರ್ಮಿಸಿದ ರಾಮಸೇತುವನ್ನು ಧ್ವಂಸ ಮಾಡಲು ಹೊರಟ ಸರಕಾರಗಳ ಹುನ್ನಾರದ ವಿರುದ್ಧ ದ್ವನಿಯೆತ್ತಿ ಜಾಗೃತಿ ಮೂಡಿಸಿ ಸಾವಿರಾರು ಜನರನ್ನು ಸಂಘಟಿಸಿ ರಾಮೇಶ್ವರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪಾಲ್ಗೊಂಡಿದ್ದರು.
ರಾಜಕೀಯದಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದ ಹೆಗ್ಗಳಿಕೆ. ಬಾಜಪದ ರಾಜ್ಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಸೇವೆ, ಗೋವಾ ಚುನಾವಣೆಯ ಉಸ್ತುವಾರಿ ವಹಿಸಿ ರಾಜಕೀಯ ಪ್ರಬುದ್ಧತೆಯ ಪ್ರದರ್ಶನ. ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ ಮೂರು ವರ್ಷ ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಹಲವು ಯಶಸ್ವಿ ಸಮಾವೇಶಗಳ ಸಂಯೋಜನೆಗೊಳಿಸಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಒಂದು ವಿಧಾನ ಸಭಾ ವ್ಯಾಪ್ತಿಯಲ್ಲಿ ಅಭೂತ ಪೂರ್ವ ಮಹಿಳಾ ಸಮಾವೇಶವನ್ನು ಸಂಘಟಿಸಿ ಹನ್ನೆರಡು ಸಾವಿರ ಮಹಿಳೆಯರನ್ನು ಬಾಜಪದ ಪತಾಕೆಯಡಿ ಸೇರಿಸಿದ ಪರಾಕ್ರಮ ಅಪ್ರತಿಮ ಹೋರಾಟಗಾರರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ರವರ ಜನ್ಮ ಶತಮಾನೋತ್ಸವದ ಅರ್ಥಪೂರ್ಣ ಅಚರಣೆ ನಡೆಸಿ ಕಾರ್ಕಳ ತಾಲೂಕಿನಾದ್ಯಂತ ಯುವಜನರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಸರಣಿಗಳನ್ನು ನಡೆಸಿದ್ದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆಯ ಅದ್ಧೂರಿ ಆಚರಣೆ ತಾಲೂಕಿನ ವಿದ್ಯಾರ್ಥಿಗಳೊಂದಿಗೆ ಚಹಾ ಕೂಟದ ಒಡನಾಟದೊಂದಿಗೆ ದೇಶ ಪ್ರೇಮವನ್ನು ಮೂಡಿಸಿದ್ದರು.
ಇನ್ನು ಸ್ವಾತಂತ್ರ್ಯ ಭಾರತದ ಆರು ದಶಕಗಳಲ್ಲಾಗದ ಕಾರ್ಯಗಳನ್ನು ಕೈಗೆತ್ತಿಕೊಂಡು ಕ್ರಿಯಾಶೀಲತೆ ಮತ್ತು ಜನಪರ ಕಾಳಜಿಯಿಂದ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಸಂಪರ್ಕ ಸಾಧಿಸಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ.ಶಾಸಕರಾದ ತಕ್ಷಣವೇ ಕಾರ್ಯ ಪೃವತ್ತರಾದ ಶಾಸಕರು ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿರುವುದು. ಕ್ಷೇತ್ರದ ಅತ್ಯಂತ ಹಿಂದುಳಿದ ಹಾಗೂ ಸಂಪರ್ಕ ರಸ್ತೆ ಇಲ್ಲದ ಪ್ರದೇಶಗಳಿಗೆ ಪ್ರಥಮ ಆದ್ಯತೆಯಲ್ಲಿ ರಸ್ತೆ, ಸೇತುವೆಗಳ ನಿರ್ಮಾಣ.ಮ್ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ಕ್ಷೇತದ ಅಭಿವೃದ್ಧಿಗಾಗಿ 87 ಕೋಟಿ ಅನುದಾನ ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಧಿವೇಶನದಲ್ಲಿ 100% ಭಾಗವಹಿಸಿದ್ದು ಪಡಿತರ ಚೀಟಿ, ಭಯೋತ್ಪಾದನೆ ಇತ್ಯಾದಿ ಹತ್ತು ಹಲವು ವಿಷಯಗಳ ಪ್ರಸ್ತಾಪ, ವಿಸ್ತೃತ ಚರ್ಚೆ, ಯಶಸ್ವಿ ಪಾಲ್ಗೊಳ್ಳುವಿಕೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ. ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜನಪ್ರತಿನಿಧಿಗಳಲ್ಲಿ ಮುಂಚೂಣಿ ಸಾಲಿನಲ್ಲಿರುವ ಶಾಸಕ. ಕಾರ್ಕಳ ತಾಲೂಕಿನ ಅತ್ಯಂತ ಕುಗ್ರಾಮಗಳ ಕಾಡಿನಲ್ಲಿ ಹತ್ತಾರು ವರ್ಷಗಳಿಂದ ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ವಾಸವಿರುವ, ಈ ತನಕ ಯಾರೂ ಗಮನ ಹರಿಸದ ಬಡ ಮಲೆಕುಡಿಯ ಜನಾಂಗದ ನೊವುಗಳನ್ನು ಆಲಿಸಿದ ಮೊದಲ ಶಾಸಕ ಇಅರಾಗಿದ್ದು, ನಕ್ಸಲ್ ಪೀಡಿತ ಪ್ರದೇಶದ ಜನರ ಬಳಿ ಸಾಗಿ ಅವರೊಂದಿಗೆ ಮುಕ್ತ ಚರ್ಚೆ ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪ್ರಯತ್ನ. ಪ್ರಸ್ತುತ ಇರುವ ಭೀಕರ ಸಮಸ್ಯೆಗಳಾದ ವಾತಾವರಣದಲ್ಲಿ ಏರುತ್ತಿರುವ ಉಷ್ಣತೆ ಮತ್ತು ಕುಸಿಯುತ್ತಿರುವ ಅಂತರ್ಜಲ ಇವುಗಳಿಂದಾಗಿ ಕಾರ್ಕಳ ತಾಲೂಕಿಗೂ ಬಿಸಿ ಮುಟ್ಟಿರುವ ನೀರಿನ ಸಮಸ್ಯೆಯಿಂದ ಜನರು ಎಚ್ಚೆತ್ತು ಕೊಳ್ಳಬೇಕೆಂಬ ದೃಷ್ಟಿಯಿಂದ ತನ್ನ ಕ್ಷೇತ್ರವಿಡೀ ಜಾಗೃತಿ ಕಾರ್ಯಕ್ರಮ ಒಂದು ಜನ-ಒಂದು ಸಸಿ, ಒಂದು ಮನೆ - ಒಂದು ಇಂಗುಗುಂಡಿ ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ಹಳ್ಳಿ ಹಳ್ಳಿಗಳನ್ನು ಸಂಚರಿಸಿ, ಯುವಕರನ್ನು ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿದ ದೇಶದ ಮೊದಲ ಪರಿಸರ ಸ್ನೇಹ ಶಾಸಕ ಎಂಬ ಬಿರುದು ವಿ.ಸುನೀಲ್ಕುಮಾರ್ ಅವರಿಗಿದೆ.
108 ಕೋಟಿ ರೂ ವೆಚ್ಚದಲ್ಲಿ ಕಾರ್ಕಳ ಕ್ಷೇತ್ರದ ಅಜೆಕಾರು ಎಣ್ಣೆಹೊಳೆ ಸ್ವರ್ಣ ನದಿಗೆ ಏತ ನೀರಾವರಿ ಯೋಜನೆ. ಸುಮಾರು 1.500ಹೆಕ್ಟೇರ್ಗೂ ಹೆಚ್ಚಿನ ಜಲಾನಯನ ಪ್ರದೇಶ. ಸುಮಾರು 40 ಕಿಂಡಿ ಅಣೆಕಟ್ಟುಗಳ ನಿರ್ಮಾಣ. ಇದರಿಂದ ಪರಿಸರದ ಅಂತರ್ಜಲ ಪ್ರಮಾಣ ಹೆಚ್ಚಳ, ಕೃಷಿಗೆ ಉತ್ತೇಜನ ಮತ್ತು ಕುಡಿಯುವ ನೀರಿನ ಯೋಜನೆ ಕಲ್ಪಿಸುವ ಮಹತ್ತರ ಯೋಜನೆ. ವಿನೂತನ ಕಲ್ಪನೆಯ ಪರಿಸರ ಉತ್ಸವವನ್ನು 25,000 ಸಸಿ 24000 ಇಂಗುಗುಂಡಿ ರಚಿಸುವ ಮೂಲಕ ಆರಂಭಿಸಿ ಪರಿಸರ ಸಂರಕ್ಷಣೆ. ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜನೆ. ಬಡ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಕಳದ ಮಿಯ್ಯಾರಿನಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲೆ, ವೃತ್ತಿಪರ ಕೋರ್ಸ್ ಕಲಿಕೆಗೆ ಬಗ್ಗೆ ಪಾಲಿಟೆಕ್ನಿಕ್ ಕಾಲೇಜು, ಸರಕಾರಿ ಐಟಿಐ ಕಾಲೇಜು, ಕರ್ನಾಟಕ ಜರ್ಮನ್ ತಾಂತ್ರಿ ತರಬೇತಿ ಸಂಸ್ಥೆ ಪ್ರಾರಂಭ ಹಾಗೂ ಕಾರ್ಕಳ ತಾಲೂಕಿನ ಬಹುತೇಕ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳ ಪುನಶ್ಚೇತನ. ತುಳುನಾಡಿನ ಅಮರ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್ ನಿರ್ಮಾಣ ಮತ್ತು ನಿರಂತರ ಅಭಿವೃದ್ದಿ ಹಾಗೂ ಆಧುನಿಕತೆಯ ಸ್ಪರ್ಶ.
ಇನ್ನು ಕಾರ್ಕಳ ಹಿರಿಯಂಗಡಿ ಬಳಿ 60.000ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ. ಕ್ರೀಡೆಯಲ್ಲಿ ವಿಶೇಷ ಒಲವು ಹೊಂದಿರುವ ಇವರು ಕಾರ್ಕಳ ತಾಲೂಕಿನಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಾಣ. ಕ್ರೀಡಾಸಕ್ತರಿಗಾಗಿ ಸುಸಜ್ಜಿತ ಈಜುಕೊಳದ ನಿರ್ಮಾಣ. ಕಾರ್ಕಳ ತಾಲೂಕು ಕಛೇರಿ ಬಳಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರೀಕರಿಗೆ ತೆರೆದ ಜಿಮ್ ಸ್ಥಾಪನೆ. ನಾಡು-ನುಡಿ ಮತ್ತು ಗ್ರಾಮೀಣ ಸಂಸ್ಕೃತಿಯ ಬಗೆಗೆ ವಿಶೇಷ ಒಲವು ಹೊಂದಿರುವ ಶಾಸಕರು, ಆಧುನಿಕ ಭರಾಟೆಯಲ್ಲಿ ತೆರೆಯ ಮರೆಗೆ ಸರಿಯುತ್ತಿರುವ ಗ್ರಾಮೀಣ ಸಂಸ್ಕೃತಿ ಮತ್ತು ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಆಟಿ ತಿಂಗಳ ಆಚರಣೆ, ದೀಪಾವಳಿ ಆಚರಣೆಗಳು, ’ಆಟಿಡೊಂಜಿ ಕಮಲ ಕೂಟ’ ದಂತಹ ಕಾರ್ಯಕ್ರಮಗಳ ಮೂಲಕ ಮಣ್ಣಿನ ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿದ್ದು ಜನಜನಿತವಾಗಿದೆ.